ಗಣೇಶಪುರ: ಸಾಧಕಿಯರಿಗೆ ಸನ್ಮಾನ
ಗಣೇಶಪುರ, ಮಾ.19: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗಣೇಶಪುರದ ಜೇಸಿಐ ವತಿಯಿಂದ ಕಾಟಿಪಳ್ಳ ಗಣೇಶಪುರದ ಶಾರದಾ ಭಜನಾ ಮಂದಿರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಆರು ಮಂದಿ ಸಾಧಕಿಯರನ್ನು ಸನ್ಮಾನಿಸಲಾಯಿತು.
ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ 18 ವರ್ಷಗಳಿಂದ ಎಚ್ಐವಿ ಸೋಂಕಿತ ಮಕ್ಕಳಿಗೆ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿರುವ ಪುಷ್ಪಾ, ಕೃಷಿ ಕ್ಷೇತ್ರದ ಜೆಸಿಂತಾ ಸ್ವಿಕ್ವೇರಾ, ವ್ಯವಹಾರ ಕ್ಷೇತ್ರದ ಉಷಾ ಎಂ. ಅಂಚನ್, ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರದ ಜ್ಯೋತಿ ಚೇಳ್ಳಾರು, ಸಮಾಜ ಸೇವಾ ಕ್ಷೇತ್ರದ ಲಾವಣ್ಯ, ಈಜು ತರಬೇತುದಾರೆ ಸವಿತಾ ಅವರನ್ನು ಸನ್ಮಾನಿಸಲಾಯಿತು.
ವಲಯ 15, ಜೇಸಿರೇಟ್ ಮತ್ತು ಮಹಿಳಾ ಜೇಸಿ ವಲಯ ಸಂಯೋಜಕಿ ಸಂಗೀತಾ ಪ್ರಭು, ಜೇಸಿಐ ವಲಯ 15ರ ಮಹಿಳಾ ಸಬಲೀಕರಣದ ಸಂಯೋಜಕಿ ಹಾಗೂ ಜೇಸಿಐ ಗಣೇಶಪುರದ ನಿಕಟ ಪೂರ್ವ ಅಧ್ಯಕ್ಷೆ ಸ್ಮಿತಾ ಪಿ. ಹೊಳ್ಳ, ಧರ್ಮಸ್ಥಳ ಸ್ವಸಹಾಯ ಸಂಘ ಕಾಟಿಪಳ್ಳ ‘ಬಿ’ ಒಕ್ಕೂಟದ ಸೇವಾ ಪ್ರತಿನಿಧಿ ನಳಿನಾಕ್ಷಿ ಸದಾಶಿವ ಭಂಡಾರಿ ಪಾಲ್ಗೊಂಡಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕವಿತಾ, ಡಾ.ಸುಕನ್ಯಾ ರಾವ್ ಭಾಗವಹಿಸಿದ್ದರು. ಜೇಸಿಐ ಗಣೇಶಪುರ ಅಧ್ಯಕ್ಷ ಉದಯ್ ಕುಮಾರ್, ಜೇಸಿಐ ಗಣೇಶಪುರ ಪೂರ್ವಾಧ್ಯಕ್ಷ ವನಿತಾ ಅಂಚನ್, ಚೇತನ್ ಅಮೀನ್, ಸಂಪತ್ ಕುಮಾರ್ ಹಾಗೂ ಸದಸ್ಯರಾದ ಶ್ರೀಶ ಕರ್ಮಾರನ್, ಲಕ್ಷ್ಮೀಶ ಅಂಚನ್, ಕಾರ್ಯದರ್ಶಿ ಶಶಿ ಕುಮಾರ್, ಶರತ್ ಕುಮಾರ್, ಚಂದನ್, ವೇಣುಗೋಪಾಲ್, ಅರುಣ್, ಸಣ್ಣಮರೇಶ್, ದೀಪಕ್, ಪ್ರಶಾಂತ್ ನಾಯಕ್, ಜೋಸ್ವಿನ್, ಜೋಸ್ವಿತ ಉಪಸ್ಥಿತರಿದ್ದರು. ಉಷಾ ಮಂದಾರ್ ವಂದಿಸಿದರು.