ಮಾ. 29ರಿಂದ ಕಟಪಾಡಿ ದರ್ಗಾ ಉರೂಸ್
ಕಾಪು, ಮಾ.21: ಕಟಪಾಡಿ ಜುಮಾ ಮಸೀದಿ ಸಮೀಪ ಅಂತ್ಯ ವಿಶ್ರಮ ಗೊಂಡಿರುವ ಅಶೈಕ್ ಪಕೀರ್ ಶಾಹ್ ವಲಿಯುಲ್ಲಾಹ್ರವರ ಉರೂಸ್ ಯಾನೆ ಝಿಯಾರತ್ ಸಮಾರಂಭವು ಮಾ. 29ರಿಂದ ಮಾ.31ರವರೆಗೆ ನಡೆಯಲಿದೆ.
ಮಾ.29ರ ಶುಕ್ರವಾರ ಜುಮ್ಮಾ ನಮಾಝಿನ ಬಳಿಕ ಮಸೀದಿ ಅಡಳಿತಾಧಿ ಕಾರಿ ಮುಹಮ್ಮದ್ ಸಫ್ವಾನ್ ಧ್ವಜರೋಹಣ ನೆರವೇರಿಸಲಿರುವರು.
ಅದೇ ದಿನ ಇಶಾ ನಮಾಝಿನ ಬಳಿಕ ಅಸ್ಸಯ್ಯದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಜಲಾಲಿಯ್ಯ ಮಜ್ಲಿಸ್ ನಡೆಯಲಿದೆ.
ಮಾ.30ರಂದು ಮಗ್ರಿಬ್ ನಮಾಝಿನ ಬಳಿಕ ಸಂದಲ್ ಮೆರವಣಿಗೆ ನಡೆಯಲಿದೆ. ರಾತ್ರಿ 9 ಗಂಟೆಗೆ ಕೊಪ್ಪಲಂಗಡಿ ಜಾಮಿಯಾ ಮಸೀದಿ ಖತೀಬ್ ಮೌಲನಾ ಆದಿಲ್ ರರಝಾ ಮತ್ತು ಅಸ್ಸಯ್ಯಿದ್ ಅಬ್ದುಲ್ ರ್ರಹಮಾನ್ ಸಾದತ್ ತಂಙಳ್ ಧಾರ್ಮಿಕ ಪ್ರಭಾಷಣ ಮಾಡಲಿದ್ದಾರೆ. ಮಾ.31ರಂದು ಬೆಳಗ್ಗೆ 9.30ಕ್ಕೆ ಮೌಲಿದ್ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story