ಮಾ. 23: ಕೃಷಿಗಾಗಿ ಬ್ಯಾಂಕ್ ಸೌಲಭ್ಯಗಳ ಮಾಹಿತಿ
ಉಡುಪಿ, ಮಾ.21: ಜಿಲ್ಲಾ ಕೃಷಿಕ ಸಂಘ ಆಯೋಜಿಸಿರುವ ಕೃಷಿಗಾಗಿ ಬ್ಯಾಂಕ್ ಸೌಲಭ್ಯ ಗಳ ಕುರಿತ ಮಾಹಿತಿ ಕಾರ್ಯಕ್ರಮ ಮಾ.23ರ ಶನಿವಾರ ಅಪರಾಹ್ನ 4:30ಕ್ಕೆ ಉಡುಪಿ ರೆಸಿಡೆನ್ಸಿ ಹೋಟೆಲ್ನ ರೂಪ್ಟಾಪ್ ಸಭಾಂಗಣದಲ್ಲಿ ನಡೆಯಲಿದೆ.
ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಮಹಾ ಪ್ರಬಂಧಕ ಬಿ.ಗೋಪಾಲಕೃಷ್ಣ ಸಾಮಗ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿ ಸಲಿದ್ದಾರೆ. ಕೃಷಿ ಮತ್ತು ಕೃಷಿಕರ ಒಳಿತಿಗಾಗಿ ಮಾಹಿತಿ ಮಾರ್ಗದಶರ್ನ ನೀಡುವ ಈ ಕಾರ್ಯಕ್ರಮದಲ್ಲಿ ಕೃಷಿಕರು, ಕೃಷಿ ಆಸಕ್ತರು ಭಾಗವಹಿಸ ುವಂತೆ ಸಂಘಟಕರು ವಿನಂತಿಸಿದ್ದಾರೆ.
Next Story