ಛಾಯಾಬಿಂಬ ಟ್ರೋಫಿ-2019 ಕ್ರಿಕೆಟ್ ಪಂದ್ಯಾಟ
ಕಾರ್ಕಳ: ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ., ಉಡುಪಿ ಜಿಲ್ಲೆ ಕಾರ್ಕಳ ವಲಯದ ಆಶ್ರಯದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಛಾಯಾಬಿಂಬ ಟ್ರೋಫಿ-2019 ಸ್ಥಳೀಯ ಗಾಂ ಮೈದಾನದಲ್ಲಿ ನಡೆಯಿತು. ಎಸ್.ಕೆ.ಪಿ.ಎ. ಜಿಲ್ಲಾಧ್ಯಕ್ಷ ವಿಲ್ಸನ್ ಗೋನ್ಸಾಲ್ವಿಸ್ ಉದ್ಘಾಟಿಸಿದರು.
ಮುಖ್ಯ ಅತಿಥಿ ಕನ್ನಡ ಚಿತ್ರರಂಗದ ಹಾಸ್ಯನಟ ಟೆನ್ನಿಸ್ ಕೃಷ್ಣ ಮಾತನಾಡಿ, ಕಲಾವಿದನ ಬದುಕಿನಲ್ಲಿ ಛಾಯಾಗ್ರಾಹಕರ ಶ್ರಮ ಬಹಳ ಮುಖ್ಯ. ಕಲಾವಿದನಲ್ಲಿರುವ ಕಲೆಯನ್ನು ಪ್ರೇಕ್ಷಕನಿಗೆ ಪರಿಚಯಿಸುವ ಅತ್ಯಂತ ಮಹತ್ವದ ಕಾರ್ಯ ಮಾಡುವುದು ಛಾಯಾಗ್ರಾಹಕ. ಚಿತ್ರರಂಗದಲ್ಲಿ ಛಾಯಾಚಿತ್ರಗ್ರಾಹಕರು ತಮ್ಮ ಕ್ಯಾಮರದ ಕಣ್ಣಿನಿಂದ ಸಿನಿಮಾ ಚಿತ್ರೀಕರಣ ಮಾಡುವ ಮೂಲಕ ಸಿನಿಮಾ ಯಶಸ್ಸನ್ನು ಕಾಣಲು ಸಾಧ್ಯ ಎಂದರು.
ಎಸ್.ಕೆ.ಪಿ.ಎ. ಕಾರ್ಕಳ ಅಧ್ಯಕ್ಷ ಭಾಸ್ಕರ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಸುನಿಲ್ ಕುಮಾರ್ ಬಜಗೋಳಿ, ಇಮ್ತಿಯಾಜ್ ಅಹ್ಮದ್, ದಯಾನಂದ ಬಂಟ್ವಾಳ, ಪ್ರವೀಣ್ ಕೊರಿಯಾ, ಗೌರವಾಧ್ಯಕ್ಷ ಪದ್ಮಪ್ರಸಾದ್ ಜೈನ್, ಕಾರ್ಯದರ್ಶಿ ಸೀತಾರಾಮ್, ಕೋಶಾಕಾರಿ ಯೋಗೀಶ್ ಉಪಸ್ಥಿತರಿದ್ದರು.
ಭಾಸ್ಕರ ಕುಲಾಲ್ ಸ್ವಾಗತಿಸಿದರು. ಪ್ರಸಾದ್ ಐಸಿರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.