ಮಾ.23: ಬ್ಯಾರಿ ಜಾನಪದ ಸಾಂಸ್ಕೃತಿಕ ಲೇಸ್
ಮಂಗಳೂರು, ಮಾ.22: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಮಾ.23ರಂದು ಸಂಜೆ 7ಗಂಟೆಗೆ ಗುರುಪುರ ಕೈಕಂಬದ ಆದರ್ಶ ನಗರದಲ್ಲಿ ಬ್ಯಾರಿ ಜಾನಪದ ಸಾಂಸ್ಕೃತಿಕ ಲೇಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಮ್ಮದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸೂರಲ್ಪಾಡಿ ಕೇಂದ್ರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಸೂರಲ್ಪಾಡಿ, ಗುರುಪುರ ಗೋಳಿದಡಿಗುತ್ತು ಗಡಿಕಾರ ವರ್ದಮಾನ ದುರ್ಗಾಪ್ರಸಾದ ಶೆಟ್ಟಿ, ನಂಡೊ ಪೆಂಙಲ್ ಅಭಿಯಾನದ ಅಧ್ಯಕ್ಷ ಹಾಜಿ ನೌಷಾದ್ ಸೂರಲ್ಪಾಡಿ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿನೋದ್ ಶೆಟ್ಟಿ, ಗುರುಪುರ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಸಲಹೆಗಾರ ಹಾಜಿ ಎಂ.ಎಚ್. ಮುಹಿಯ್ಯುದ್ದೀನ್ ಅಡ್ಡೂರು, ಸದಸ್ಯ ಹಾಜಿ ಮುಹಮ್ಮದ್ ಹನೀಫ್ ಎದುರುಪದವು, ಉದ್ಯಮಿ ಶ್ರೀನಿವಾಸ ಮಲ್ಯ, ಗುರುಪುರ ಕೈಕಂಬ ಸಮಾಜ ಸೇವಕ ಎಂ.ಜಿ. ಬಶೀರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭ ತಾಲೀಮು ಮಾಸ್ಟರ್ಗಳಾದ ಎಂ.ಜಿ. ಅಬ್ದುಲ್ಲ ಗುರುಪುರ, ಎಂ.ಜಿ. ಶಾಹುಲ್ ಹಮೀದ್, ತಾಲೀಮು ಕಲಿಗಾರರಾದ ಇಬ್ರಾಹೀಂ ನಡುಗುಡ್ಡೆ, ಅಮೀರ್ ಗುರುಪುರ ಅವರನ್ನು ಸನ್ಮಾನಿಸಲಾಗುವುದು. ರಾತ್ರಿ 8:30 ಗಂಟೆಗೆ ನಡೆಯಲಿರುವ ಬ್ಯಾರಿ ಕವಿಗ್ಠೋಯ ಅಧ್ಯಕ್ಷತೆಯನ್ನು ಮುಹಮ್ಮದ್ ಬಡ್ಡೂರು ವಹಿಸಲಿದ್ದು, ಶರೀಫ್ ನಿರ್ಮುಂಜೆ, ಆರೀಸ್ ತೋಡಾರ್, ಎಂ.ಪಿ. ಬಶೀರ್ ಅಹ್ಮದ್ ಬಂಟ್ವಾಳ, ಲುಕ್ಮಾನ್ ಅಡ್ಯಾರ್, ಕಾ-ಶಿಖ ಬಜ್ಪೆ, ಇಬ್ರಾಹೀಂ ಖಲೀಲ್ ಪುತ್ತೂರು ಕವಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 7 ಗಂಟೆಗೆ ಶರೀಫ್ ಬೆಳ್ಳಾರೆ ಮತ್ತು ಬಳಗದಿಂದ ಬ್ಯಾರಿ ಹಾಡು, ರಾತ್ರಿ 9ಗಂಟೆಗೆ ಎಂ.ಜಿ.ಎಂ. ತಾಲೀಮು ಸ್ಪೋರ್ಟ್ಸ್ ಅವರಿಂದ ತಾಲೀಮು ಕಲಿ ನಡೆಯಲಿದೆ ಎಂದು ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ತಿಳಿಸಿದ್ದಾರೆ.