ಪಾಂಡೇಶ್ವರದಲ್ಲಿ 7 ಮನೆಗಳಲ್ಲಿ ಅಗ್ನಿ ಆಕಸ್ಮಿಕ: ಹೊತ್ತಿ ಉರಿದ ಛಾವಣಿ
ಮಂಗಳೂರು, ಮಾ.23: ಏಳು ಮನೆಗಳು ಅಗ್ನಿ ಆಕಸ್ಮಿಕಕ್ಕೊಳಗಾದ ಘಟನೆ ಇಲ್ಲಿನ ಪಾಂಡೇಶ್ವರದ ಧೂಮಪ್ಪ ಕಾಂಪೌಂಡ್ ಎಂಬಲ್ಲಿ ನಡೆದಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ನಡೆದಿದೆ ಎನ್ನಲಾಗಿದ್ದು, 7 ಹಂಚಿನ ಮನೆಗಳಲ್ಲಿ 2 ಮನೆಗಳು ಸಂಪೂರ್ಣ ಹೊತ್ತಿ ಉರಿದಿದೆ. ಘಟನೆ ನಡೆದ ಸ್ಥಳ ವಸತಿ ಪ್ರದೇಶವಾಗಿದ್ದು, ಹಲವು ಮನೆಗಳು ಸಮೀಪದಲ್ಲಿವೆ. ಅಗ್ನಿ ಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅಪಾಯ ತಪ್ಪಿದಂತಾಗಿದೆ.