ಉಳ್ಳಾಲ: ಎಸೆಸ್ಸೆಫ್ ವತಿಯಿಂದ ರಕ್ತದಾನ ಶಿಬಿರ
ಉಳ್ಳಾಲ, ಮಾ.24: ಎಸೆಸ್ಸೆಫ್ ದ.ಕ. ಜಿಲ್ಲಾ ಬ್ಲಡ್ ಸೈಬೋ, ಎಸೆಸ್ಸೆಫ್ ಉಳ್ಳಾಲ ಡಿವಿಜನ್, ಎಸೆಸ್ಸೆಫ್ ಉಳ್ಳಾಲ ಸೆಕ್ಟರ್, ಎಸೆಸ್ಸೆಫ್ ಮುಕ್ಕಚ್ಚೇರಿ ಯುನಿಟ್ ಇವುಗಳ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಉಳ್ಳಾಲದ ಮುಕ್ಕಚ್ಚೇರಿ ಜಂಕ್ಷನ್ನಲ್ಲಿ ರವಿವಾರ ನಡೆಯಿತು.
ದ.ಕ.ಜಿಲ್ಲಾ ಎಸೆಸ್ಸೆಫ್ ಉಪಾಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಸೆಸ್ಸೆಫ್ ಕಾರ್ಯ ಕರ್ತರು ಹಮ್ಮಿಕೊಂಡ ಈ ಕಾರ್ಯಕ್ರಮವು ಜಾತಿ ಮತ ಭೇದವಿಲ್ಲದೆ ಎಲ್ಲಾ ರೋಗಿಗಳಿಗೂ ಅವಶ್ಯಕತೆ ಇರುವ ರಕ್ತವನ್ನು ನೀಡಿ ಮಾನವೀಯತೆಯ ಸಂದೇಶವನ್ನು ನೀಡುತ್ತಿದೆ. ಜಿಲ್ಲೆಯ 11 ಡಿವಿಜನ್ ಮತ್ತು ಸೆಕ್ಟರ್ಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ 4,500 ಯುನಿಟ್ಗಿಂತಲೂ ಅಧಿಕ ರಕ್ತ ಶೇಖರಣೆ ಮಾಡಲು ಬ್ಲಡ್ ಸೈಬೋದಿಂದ ಸಾಧ್ಯವಾಗಿದೆ ಎಂದರು.
ಉಳ್ಳಾಲ ಸೆಕ್ಟರ್ ಅಧ್ಯಕ್ಷ ಶಬೀರ್ ಪೇಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಕ್ಕಚ್ಚೇರಿ ಜುಮಾ ಮಸೀದಿ ಖತೀಬ್ ಝೈದ್-ಬಾ-ಅಹ್ಸನ್ ದುಆಗೈದರು. ದ.ಕ.ಜಿಲ್ಲಾ ಎಸೆಸ್ಸೆಫ್ ಉಪಾಧ್ಯಕ್ಷ ಜಮಾಲುದ್ದೀನ್ ಸಖಾಫಿ, ಉಳ್ಳಾಲ ಡಿವಿಜನ್ ಅಧ್ಯಕ್ಷ ಕುಬೈಬ್ ತಂಙಳ್, ಡಾ. ಪ್ರಜ್ವಲ್, ಎಸ್ವೈಎಸ್ ಉಳ್ಳಾಲ ಸೆಂಟರ್ ಕಾರ್ಯದರ್ಶಿ ಬಶೀರ್ ಸಖಾಫಿ, ಡಿವಿಸನ್ ಬ್ಲಡ್ ಸೈಬೋ ನಿರ್ದೇಶಕ ಹಕೀಮ್ ಪೂಮಣ್ಣು, ಉಳ್ಳಾಲ ಸೆಕ್ಟರ್ ಉಸ್ತುವಾರಿ ಇಸ್ಮಾಯಿಲ್ ತಲಪಾಡಿ, ಉಳ್ಳಾಲ ಸೆಕ್ಟರ್ ಬ್ಲಡ್ ಸೈಬೋ ನಿರ್ದೇಶಕ ಮುಹಮ್ಮದ್ ಕೈಕೋ, ಎಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಜಾಬಿರ್ ಫಾಲಿಳಿ, ಉಳ್ಳಾಲ ಸೆಕ್ಟರ್ ಖಲೀಫ ಹಾಫೀಲ್ ಮುಹೀನ್, ಮುಕ್ಕಚ್ಚೇರಿ ಯುನಿಟ್ ಕಾರ್ಯಕರ್ತರಾದ ಅಝೀಮ್, ಶಿಹಾನ್, ಬಾಶೀತ್, ಫಾಝಿಲ್ ಉಪಸ್ಥಿತರಿದ್ದರು.
ಮುಝಮ್ಮಿಲ್ ಮದನಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಝೀಮ್ ಮುಕ್ಕಚ್ಚೇರಿ ವಂದಿಸಿದರು.