ಉಳ್ಳಾಲ ದರ್ಗಾ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ
ಉಳ್ಳಾಲ: ದ.ಕ. ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಶೀದ್ ಅವರು ಈ ಸಂದರ್ಭ ಮಿಥುನ್ ರೈ ಅವರನ್ನು ಸ್ವಾಗತಿಸಿದರು. ಸಯ್ಯದ್ ಮದನಿ ಅರಬಿಕ್ ಟ್ರಸ್ಟ್ ಮಾಜಿ ಉಪಾಧ್ಯಕ್ಷ ಅಹ್ಮದ್ ಬಾವ ಕೊಟ್ಟಾರ ದರ್ಗಾ ತಬ್ರೂಕ್ ನೀಡಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಉಳ್ಳಾಲ ನಗರ ಜೆಡಿಎಸ್ ಅಧ್ಯಕ್ಷ ಯು.ಕೆ. ಮಹಮ್ಮದ್ ಮುಸ್ತಫ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಹಮೀದ್ ಕೋಡಿ, ಫಾರೂಕ್ ಉಳ್ಳಾಲ್ ಅಲ್ತಾಫ್ ಈಶ್ವರ ಉಳ್ಳಾಲ, ಸಂತೋಷ್ ಶೆಟ್ಟಿ, ಅಬ್ದುಲ್ ರಹಮಾನ್ ಕೋಡಿಜಾಲ್, ಸುರೇಶ್ ಭಟ್ನಗರ ಅದ್ದಾಮ ಮೇಲಂಗಡಿ, ರಫೀಕ್ ಕಲ್ಲಾನ, ಖಾದರ್ ಉಪ್ಪಿನಂಗಡಿ, ಇಸ್ಮಾಯಿಲ್ ದೊಡ್ಡಮನೆ, ಮೊಹಿಯುದ್ದೀನ್ ಕೋಡಿ , ಅಬ್ಬಾಸ್ ಪಿಲಾರ್,ಯು. ಎ ಇಸ್ಮಾಯಿಲ್ ,ಕಬೀರ್ ಬುಖಾರಿ ಯೂಸುಫ್ ಉಳ್ಳಾಲ, ಮಹಮ್ಮದ್ ಮುಕ್ಕಚ್ಚೇರಿ, ಬಾಝಿಲ್ ಡಿಸೋಜ, ದಿನೇಶ್ ರೈ, ಇಸ್ಮಾಯಿಲ್ ಪೇಟೆ, ಅಶ್ರಫ್ ಮುಕ್ಕಚ್ಚೇರಿ, ಜಮಾಲ್ ಬಾರ್ಲಿ, ಸಲೀಂ ಕೋಡಿ, ಹನೀಫ್ ಸೋಲಾರ್ ಫೈರೋಝ್ ಅಹಮದ್ ಕೋಡಿ, ಆಫ್ರೀದಿ ಹುಸೈನ್ ಕೊಟ್ಟಾರ, ಮಲಿಕ್ ಮೇಲಂಗಡಿ, ಇರ್ಷಾದ್ ಮೇಲಂಗಡಿ, ಮೇಘ ಸಲೀಂ, ನಾಸೀರ್ ಸಾಮಣಿಗೆ ಮೊದಲಾದವರು ಉಪಸ್ಥಿತರಿದ್ದರು.