ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಉಡುಪಿಗೆ
ಉಡುಪಿ, ಮಾ.25: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ರಾತ್ರಿ 10ಗಂಟೆಗೆ ಉಡುಪಿಗೆ ಆಗಮಿಸಿ ಮಣಿಪಾಲದ ಹೊಟೇಲ್ ಕಂಟ್ರಿ ಇನ್ನಲ್ಲಿ ವಾಸ್ತವ್ಯ ಮಾಡುವರು.
ನಾಳೆ ಬೆಳಗ್ಗೆ 8:30ಕ್ಕೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಅವರು ಪರ್ಯಾಯ ಪಲಿಮಾರುಶ್ರೀಗಳನ್ನು ಭೇಟಿ ಮಾಡುವರು. ಬೆಳಗ್ಗೆ 9:15ಕ್ಕೆ ಮಣಿಪಾಲದ ಹೊಟೇಲ್ ಕಂಟ್ರಿ ಇನ್ನಲ್ಲಿ ಜಿಲ್ಲೆಯ ಮೀನುಗಾರ ಮುಖಂಡರನ್ನು ಭೇಟಿ ಮಾಡುವ ನಿರ್ಮಲಾ ಸೀತಾರಾಮನ್, 10:30ಕ್ಕೆ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮಲ್ಪೆಯ ಮೀನುಗಾರರ ಮನೆಗಳಿಗೆ ತೆರಳುವರು.
ಬೆಳಗ್ಗೆ 11 ಗಂಟೆಗೆ ಕುಂಜಿಬೆಟ್ಟಿನ ಬಿಜೆಪಿ ಕಚೇರಿ ಬಳಿ ನಡೆಯುವ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಳ್ಳುವ ಅವರು, ಅಪರಾಹ್ನ 12:15ಕ್ಕೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸುವ ವೇಳೆ ಉಪಸ್ಥಿತರಿರುವರು. 1:30ಕ್ಕೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ತೆರಳುವರು.
Next Story