ಶಿವಸೇನೆ ಅಭ್ಯರ್ಥಿ ಗೌತಮ್ ಪ್ರಭು ನಾಮಪತ್ರ ಸಲ್ಲಿಕೆ
ಉಡುಪಿ, ಮಾ. 25: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಶಿವಸೇನೆ ಅಭ್ಯರ್ಥಿಯಾಗಿ ಗೌತಮ್ ಪ್ರಭು ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ನಗರದ ಸಿಪಿಸಿ ಪ್ಲಾಜಾದಲ್ಲಿ ಆರಂಭಗೊಂಡ ಶಿವಸೇವೆ ಪಕ್ಷದ ಕಚೇರಿಯನ್ನು ಉದ್ಘಾಟಿಸಿದ ಕರ್ನಾಟಕ ಶಿವಸೇನೆಯ ವಕ್ತಾರ ಕುಮಾರ ಹಾಕರಿ ಮಾತನಾಡಿ, ಶಿವಸೇನೆಯು ರಾಜ್ಯದ ಮೈಸೂರು, ಬಿಜಾಪುರ, ಚಿಕ್ಕೋಡಿ, ಬಾಗಲಕೋಟೆ, ಉಡುಪಿ ಚಿಕ್ಕಮಗಳೂರು, ಬಳ್ಳಾರಿ, ಕಾರವಾರ, ಗುಲ್ಬರ್ಗ, ಹಾವೇರಿ, ಕೊಪ್ಪಳ, ಧಾರವಾಡ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಇದರಲ್ಲಿ ಎರಡು ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಖಚಿತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಸೇನೆ ಕರ್ನಾಟಕ ಕರಾವಳಿ ಅಧ್ಯಕ್ಷ ಮಧುಕರ ಮುದ್ರಾಡಿ, ಅಭ್ಯರ್ಥಿ ಗೌತಮ್ ಪ್ರಭು, ಮುಖಂಡರಾದ ಜಿತೇಶ್ ಕುಮಾರ್, ಅಂಬಿಕಾ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಕಾರ್ಯಕರ್ತರು ವಾಹನ ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.
Next Story