ಅಕ್ರಮ ಮರಳು ಸಾಗಾಟ: ಏಳು ಮಂದಿ ಸೆರೆ
ಕುಂದಾಪುರ, ಮಾ.25: ಇನ್ಸ್ಸುಲೇಟರ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಏಳು ಮಂದಿಯನ್ನು ಕುಂದಾಪುರ ಪೊಲೀಸರು ಮಾ.25ರಂದು ಬೀಜಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ66ರಲ್ಲಿ ಬಂಧಿಸಿದ್ದಾರೆ.
ಅಬ್ದುಲ್ ಸತ್ತಾರ್ (23), ಮಂಜುನಾಥ ದಮ್ಮೂರು (19), ಶ್ರೀಕಾಂತ್ (28), ಶರಣಪ್ಪ(19), ರಾಜೇಶ ಶೆಟ್ಟಿ(40), ನೌಶಾದ್ ಆಲಿ(21), ಸುಕೇಶ ಕೊಟ್ಯಾನ್ (34) ಬಂಧಿತ ಆರೋಪಿಗಳು. ಇವರಿಂದ ಮರಳು ಸಮೇತ ಇನ್ಸುಲೇಟರ್ ಹಾಗೂ ಇನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಇವರು ಇನೋವಾ ಕಾರಿನಲ್ಲಿ ಉಡುಪಿ ಕಡೆಯಿಂದ ಕಳವು ಮಾಡಿದ ಮರಳನ್ನು ಮಾರಾಟ ಮಾಡಲು ಇನ್ಸುಲೇಟರ್ನಲ್ಲಿ ಸಾಗಿಸುತ್ತಿದ್ದರು. ಪೊಲೀಸರು ತಪಾಸಣೆ ವೇಳೆ ಇದನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಮರಳಿನ ಮೌಲ್ಯ 20ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story