ಕಲ್ಲಡ್ಕ : ಟಿಕ್ಕಾ ಪಾಯಿಂಟ್ ಕಚೇರಿ ಉದ್ಘಾಟನೆ, ಸ್ವಚ್ಛತಾ ಕಾರ್ಯಕ್ರಮ
ವಿಟ್ಲ, ಮಾ.25 : ಟಿಕ್ಕಾ ಪಾಯಿಂಟ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಕಲ್ಲಡ್ಕ ಇದರ ಜೆಮ್ ಸ್ಕೂಲ್ ರಸ್ತೆಯಲ್ಲಿನ ನೂತನ ಕಚೇರಿಯ ಉದ್ಘಾಟನಾ ಸಮಾರಂಭ ಹಾಗೂ ಪರಿಸರ ಸ್ವಚ್ಛತಾ ಕಾರ್ಯಕ್ರಮ ರವಿವಾರ ನಡೆಯಿತು.
ಕ್ಲಬ್ ನ ಕಚೇರಿ ಉದ್ಘಾಟನೆ ಹಾಗೂ ಕಲ್ಲಡ್ಕ ಮುಖ್ಯ ರಸ್ತೆಯಿಂದ ಜೆಮ್ ಪಬ್ಲಿಕ್ ಸ್ಕೂಲ್ ತನಕದ ರಸ್ತೆಯಲ್ಲಿ ರಸ್ತೆ ಬದಿಯ ಸ್ವಚ್ಛತಾ ಕಾರ್ಯಕ್ರಮಕ್ಕೆ ಬಂಟ್ವಾಳ ತಾಲೂಕು ಎಪಿಎಂಸಿ ಅದ್ಯಕ್ಷ ಕೆ. ಪದ್ಮನಾಭ ರೈ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕ್ರೀಡಾ ಸಂಘ ಕಟ್ಟಿಕೊಂಡು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಜೊತೆಗೆ ಸ್ವಚ್ಛತಾ ಕಾರ್ಯಕ್ರಮ ಹಾಗೂ ಇನ್ನಿತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ವ ಜನತೆಯ ಸಂಕಷ್ಟದಲ್ಲಿ ಭಾಗಿಯಾಗುವ ಮೂಲಕ ಮನುಷ್ಯ ಪ್ರೇಮಿಯಾಗಿ ದೇಶದ ಜಾತ್ಯತೀತ ಪರಂಪರೆಯನ್ನು ಉಳಿಸಿಕೊಂಡು ಬರುವ ಜವಾಬ್ದಾರಿ ಯುವಕರ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೋಳ್ತಮಜಲು ಹಜಾಜ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಇಮ್ತಿಯಾಝ್ ಮಾತನಾಡಿ ಕ್ರೀಡೆಯನ್ನು ಕೇವಲ ಮನೋರಂಜನೆ ಹಾಗೂ ಸಮಯ ಕಳೆಯಲು ಬಳಸಿಕೊಳ್ಳದೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಕ್ರೀಡಾ ಕೋಟದಡಿ ಔದ್ಯೋಗಿಕ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಕಲ್ಲಡ್ಕ ಮದರಸ ಮುಖ್ಯ ಶಿಕ್ಷಕ ಬಿ.ಟಿ.ಇಕ್ಬಾಲ್ ದಾರಿಮಿ ಪ್ರಾರ್ಥನೆ ನೆರವೇರಿಸಿದರು. ಸಹ ಶಿಕ್ಷಕರಾದ ಅಬ್ದುಲ್ಲಾ ಮುಸ್ಲಿಯಾರ್, ಅಬ್ದುಲ್ ರಝಾಕ್ ಮುಸ್ಲಿಯಾರ್, ಬಿ.ಮೂಡ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಮಾಸ್ಟರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ತೀರ್ಪುಗಾರ ಇಬ್ರಾಹಿಂ ಬಶೀರ್ ಕದ್ಕಾರ್ ಪ್ರಮುಖರಾದ ಟಿಕ್ಕಾ ಅಶ್ರಫ್ ಕಲ್ಲಡ್ಕ, ಸಿದ್ದೀಕ್ ವೆಲ್ಕಮ್, ಹಾರಿಸ್ ಅಮರ್, ರಫೀಕ್ ಮಾಸ್ಟರ್, ಹಮೀದ್ ಕೆಲಿಂಜ, ಅಬ್ದುಲ್ ಖಾದರ್ ಕೋಡಿ, ಜವಾಝ್ ಕಲ್ಲಡ್ಕ, ನವಾಝ್ ಕಲ್ಲಡ್ಕ, ಅಹಮದ್ ಬಾವ, ಮಸೂದ್ ಮದಕ, ಮುಸ್ತಾಕ್ ಕಲ್ಲಡ್ಕ, ಸವೂದ್ ವೀರಕಂಭ, ಇರ್ಫಾನ್ ಮುರಬೈಲ್, ಕ್ಲಬ್ ಕಾರ್ಯದರ್ಶಿ ಜೈದ್ ಕಲ್ಲಡ್ಕ, ಕೋಶಾಧಿಕಾರಿ ಫಾರೂಕ್ ಬುಟ್ಟೋ ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ಶಾಫಿ ವಂದಿಸಿದರು