ಮಾ.27ರಿಂದ ಸೋಮೇಶ್ವರ ಉಚ್ಚಿಲ ಉರೂಸ್-ಧಾರ್ಮಿಕ ಪ್ರವಚನ
ಮಂಗಳೂರು, ಮಾ.26: ಸೋಮೇಶ್ವರ ಉಚ್ಚಿಲ 407 ಜುಮಾ ಮಸೀದಿಯ ಆವರಣದಲ್ಲಿರುವ ಹಝ್ರತ್ ಅಸೈಯದ್ ಅರಬಿ ವಲಿಯುಲ್ಲಾಹಿ ತಂಙಳ್ರ ಹೆಸರಿನಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ನೇರ್ಚೆ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮವು ಮಾ.27ರಿಂದ ಎಪ್ರಿಲ್ 7ರವರೆಗೆ ನಡೆಯಲಿದೆ ಎಂದು ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಲಾಂ ಉಚ್ಚಿಲ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಾ.27ರಂದು ಸಂಜೆ ನಡೆಯುವ ಮಖಾಂ ಝಿಯಾರತ್ಗೆ ಮಸೀದಿಯ ಮುದರ್ರಿಸ್ ಅಲ್ಹಾಜ್ ಎಂ.ಪಿ. ಇಬ್ರಾಹೀಂ ಫೈಝಿ ಉದ್ಯಾವರ ನೇತೃತ್ವ ನೀಡಲಿದ್ದಾರೆ. ಮಗ್ರಿಬ್ ನಮಾಝ್ ಬಳಿಕ ನಡೆಯುವ ಕಾರ್ಯಕ್ರಮವನ್ನು ಖಾಝಿ ಅಸೈಯದ್ ಫಝಲ್ ಕೋಯಮ್ಮ ಉದ್ಘಾಟಿಸಲಿದ್ದಾರೆ. ನೌಫಾಳ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಲಿದ್ದಾರೆ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಮತ್ತು ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ ಭಾಗವಹಿಸುವರು.
ಮಾ.28ರಂದು ಅಸೈಯದ್ ಕೆ.ಎಸ್.ಆಟಕ್ಕೋಯ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಸ್ವಲಾತ್ ಮತ್ತು ದ್ಸಿಕ್ರ್ ವಾರ್ಷಿಕ ನಡೆಯಲಿದ್ದು, ಡಾ. ಫಾಝಿಲ್ ರಝ್ವಿ ಕಾವಳಕಟ್ಟೆ ದುಆಗೈಯುವರು. ಹಾಫಿಳ್ ಜುನೈದ್ ಜೌಹರಿ ಕೊಲ್ಲಂ ಪ್ರವಚನ ನೀಡುವರು. ಮಾ.29ರಂದು ಅಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿ ಕೋಯ ತಂಙಳ್ ಬಾಯಾರ್ ದುಆಗೈಯುವರು. ರಾಶಿದ್ ಬುಖಾರಿ ಕುಟ್ಯಾಡಿ ಮತ್ತು ಅಬ್ದುಲ್ ಬಾರಿ ಸಅದಿ ಉಚ್ಚಿಲ ಪ್ರವಚನ ನೀಡುವರು.
ಮಾ.30ರಂದು ಎಂ. ಅಲಿಕುಂಞಿ ಮುಸ್ಲಿಯಾರ್ ಶಿರಿಯಾ ದುಆಗೈಯುವರು. ವೌಲಾನಾ ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ, ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಪ್ರವಚನ ನೀಡುವರು. ಮಾ.31ರಂದು ಸಂಜೆ 4:30ಕ್ಕೆ ನಡೆಯುವ ಸೌಹಾರ್ದ ಸಮಾವೇಶದಲ್ಲಿ ಎನ್ಕೆಎಂ ಶಾಫಿ ಸಅದಿ ಬೆಂಗಳೂರು, ಡಾ. ಎಮ್ಮೆಎಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಪ್ರೊ.ಅನೀಸ್ ಕೌಸರಿ ಮುಖ್ಯ ಭಾಷಣ ಮಾಡುವರು. ಉಚ್ಚಿಲಕೋಟೆ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮನಾಭ ತಂತ್ರಿ, ಸಂತ ಅಲೋಶಿಯಸ್ ಸಂಸ್ಥೆಯ ನಿರ್ದೇಶಕ ಫಾ. ಡೆನ್ಸಿಲ್ ಲೋಬೊ ಭಾಗವಹಿಸಲಿದ್ದಾರೆ. ಅಂದು ರಾತ್ರಿ ನಡೆಯುವ ಕಾರ್ಯಕ್ರಮದಲ್ಲಿ ಅತಾವುಲ್ಲಾ ತಂಙಳ್ ಉದ್ಯಾವರ ದುಆಗೈಯುವರು. ಸಿದ್ದೀಕ್ ಅಝ್ಹರಿ ಪಯ್ಯನ್ನೂರು ಮತ್ತು ಹಾರೂನ್ ಅಹ್ಸನಿ ಪ್ರವಚನ ನೀಡುವರು. ಎಪ್ರಿಲ್ 1ರಂದು ಅಸೈಯದ್ ಝೈನುಲ್ ಆಬಿದೀನ್ ತಂಙಳ್ ಪೊಸೋಟ್ ದುಆಗೈಯುವರು. ನವಾಝ್ ಮನ್ನಾಣಿ ಪರವೂರು ಮತ್ತು ಕಾಸಿಂ ದಾರಿಮಿ ಕಿನ್ಯ ಪ್ರವಚನ ನೀಡುವರು.
ಎಪ್ರಿಲ್ 2ರಂದು ಬೆಳಗ್ಗೆ 10ಕ್ಕೆ ಉಲಮಾ-ಉಮರಾ ಕಾನ್ಫರೆನ್ಸ್ ನಡೆಯಲಿದೆ. ಎಪ್ರಿಲ್ 2ರಂದು ಅಬ್ದುಲ್ ಕರೀಂ ಫೈಝಿ ಕುಂತೂರು ಮತ್ತು ಅಹ್ಮದ್ ಬಾಖವಿ, ಎಪ್ರಿಲ್ 4ರಂದು ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್, ಎಪ್ರಿಲ್ 4ರಂದು ಯಹ್ಯಾ ಬಾಖವಿ ಕಣ್ಣೂರು ಪ್ರವಚನ ನೀಡುವರು. ಎಪ್ರಿಲ್ 5ರಂದು ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಪ್ರವಚನ ನೀಡಲಿದ್ದು, ಖಾಝಿ ಇಬ್ರಾಹೀಂ ಮುಸ್ಲಿಯಾರ್ ಬೇಕಲ ದುಆಗೈಯುವರು. ಎಪ್ರಿಲ್ 6ರಂದು ಮುಳ್ಳೂರುಕೆರೆ ಮುಹಮ್ಮದ್ ಅಲಿ ಸಖಾಫಿ ಮತ್ತು ಮುನೀರ್ ಸಖಾಫಿ ಪ್ರವಚನ ನೀಡುವರು. ಎಪ್ರಿಲ್ 7ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಮಸ್ತ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಙಳ್ ದುಆಗೈಯುವರು. ಯಾಸೀನ್ ಜೌಹರಿ ಕೊಲ್ಲಂ ಮತ್ತು ಸ್ವದಖತುಲ್ಲಾ ಫೈಝಿ ಕೊಲ್ಲಂ ಪ್ರವಚನ ನೀಡುವರು. ಅಂದು ರಾತ್ರಿ 11ರಿಂದ ಮರುದಿನ ಬೆಳಗ್ಗೆ 7ರವರೆಗೆ ಅನ್ನದಾನ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಸೀದಿಯ ಅಧ್ಯಕ್ಷ ಪಿ.ಎ. ಅಬ್ಬಾಸ್ ಹಾಜಿ ಪೆರಿಬೈಲ್, ಉಪಾಧುಕ್ಷ ಯು. ಅಬ್ದುಸ್ಸಲಾಂ, ಇಸ್ಮಾಯೀಲ್ ಹಾಜಿ ಕೊಪ್ಪಳ, ಯು.ಬಿ. ಮುಹಮ್ಮದ್ ಹಾಜಿ ಉಪಸ್ಥಿತರಿದ್ದರು.