ಪಡುಮಲೆ ಜುಮಾ ಮಸೀದಿಯಲ್ಲಿ ಆಂಡ್ ನೇರ್ಚೆ, ಸಾಮೂಹಿಕ ಪ್ರಾರ್ಥನೆ
ಪುತ್ತೂರು: ತಾಲೂಕಿನ ಪಡುಮಲೆ(ಪಮ್ಮಲ) ಜುಮ್ಮಾ ಮಸೀದಿಯಲ್ಲಿ ಅಂತ್ಯ ವಿಶ್ರಮ ಹೊಂದಿರುವ ಮಹಾನುಭಾವರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಆಂಡ್ ನೇರ್ಚೆ, ಧಾರ್ಮಿಕ ಉಪನ್ಯಾಸ ಮತ್ತು ಸಾಮೂಹಿಕ ಪಾರ್ಥನೆ ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಾ.24ರಂದು ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಡುಮಲೆ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಪಿ. ಮುಹಮ್ಮದ್ ಕುಂಞಿ ಮುಸ್ಲಿಯಾರ್ ವಹಿಸಿದ್ದರು. ಆಶೀರ್ವಚನ ಹಾಗೂ ಸಾಮೂಹಿಕ ಪಾರ್ಥನೆಯ ನೇತೃತ್ವವನ್ನು ಪಾಣಕ್ಕಾಡ್ ಹಾರಿಸ್ ಅಲಿ ಶಿಹಾಬ್ ತಂಙಳ್ ನಿರ್ವಹಿಸಿದರು. ಪಮ್ಮಲ ಮಸೀದಿಯ ಖತೀಬ್ ಸಂಶುದ್ದೀನ್ ದಾರಿಮಿ ಉದ್ಘಾಟಿಸಿದರು.
ಅತಿಥಿಗಳಾಗಿ ಕುಂಬ್ರ ರೇಂಜ್ ಮದ್ರಸ ಮೆನೇಜ್ಮೆಂಟ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಹಿರಾ, ಈಶ್ವರಮಂಗಲ ಮುದರ್ರಿಸ್ ಶಿಹಾಬುದ್ದೀನ್ ಮುಸ್ಲಿಯಾರ್, ಪಾಳ್ಯತ್ತಡ್ಕ ಮಸೀದಿಯ ಖತೀಬ್ ಅಬ್ದುಲ್ ರಹಿಮಾನ್ ಫೈಝಿ, ಮುಂಡೋಳೆ ಖತೀಬ್ ಅಬೂಬಕ್ಕರ್ ಸಅದಿ, ಪಮ್ಮಲ ಮುಅಲ್ಲಿಂ ಅಬ್ದುಲ್ ಲತೀಫ್ ಮುಸ್ಲಿಯಾರ್, ಸಿ.ಕೆ. ಮುಹಮ್ಮದ್ ದಾರಿಮಿ ಮಾಡನ್ನೂರು, ಅಬ್ದುಲ್ ಖರೀಂ ದಾರಿಮಿ ಕುಂಬ್ರ, ಹಸನ್ ಬಾಖವಿ ಮೊದಲಾದವರು ಉಪಸ್ಥಿತರಿದ್ದರು.
ಆಂಡ್ ನೇರ್ಚೆಯ ನಿಮಿತ್ತ ಹಮ್ಮಿಕೊಂಡ ಅನ್ನದಾನ ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರಕ್ಕೂ ಮಿಕ್ಕಿ ಮಂದಿ ಪಾಲ್ಗೊಂಡರು. ಹಿಂದೂ ಮುಸ್ಲಿಮರು ಸೇರಿದಂತೆ ಹಲವಾರು ಮಂದಿ ಆಡು, ಕೋಳಿ ಹರಕೆ ರೂಪದಲ್ಲಿ ನೀಡಿದರು. ಸರ್ವ ಜಾತಿಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪಮ್ಮಲ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಬಡಗನ್ನೂರು ಸ್ವಾಗತಿಸಿದರು.