ದ.ಕ. ಲೋಕಸಭಾ ಕ್ಷೇತ್ರದಲ್ಲಿ 24 ನಾಮಪತ್ರ ಸಲ್ಲಿಕೆ
ಮಂಗಳೂರು, ಮಾ.26: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಮಂಗಳವಾರ ವಿವಿಧ ರಾಷ್ಟ್ರೀಯ ಪಕ್ಷಗಳು ಹಾಗೂ ಪಕ್ಷೇತರರಿಂದ ಒಟ್ಟು 12 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 24 ನಾಮಪತ್ರಗಳು ಸಲ್ಲಿಕೆಯಾಗಿವೆ.
ಮಂಗಳವಾರ ಬೆಳಗ್ಗೆ ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್ (2) ಹಾಗೂ ಬಿಜೆಪಿಯಿಂದ ಸುದರ್ಶನ (2), ಪಕ್ಷೇತರ ಪಕ್ಷದಿಂದ ಸುರೇಶ್ ಪೂಜಾರಿ ಎಚ್.(2), ಬಿಎಸ್ಪಿಯಿಂದ ಸತೀಶ್ ಸಾಲ್ಯಾನ್, ಹಿಂದುಸ್ಥಾನ ಜನತಾ ಪಾರ್ಟಿಯಿಂದ ಸುಪ್ರೀತ್ ಕುಮಾರ್ ಪೂಜಾರಿ, ಪಕ್ಷೇತರ ಪಕ್ಷಗಳಿಂದ ಮುಹಮ್ಮದ್ ಖಾಲೀದ್, ಡೊಮಿನಿಕ್ ಅಲೆಗ್ಸಾಂಡರ್ ಡಿಸೋಜ, ವೆಂಕಟೇಶ್ ಬೆಂಡೆ, ಅಬ್ದುಲ್ ಹಮೀದ್ ಅವರು ಜಿಲ್ಲಾ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದಿಂದ ಮಿಥುನ್ ರೈ (4), ಬಿಜೆಪಿಯಿಂದ ನಳಿನ್ಕುಮಾರ್ ಕಟೀಲ್(2), ಲೋಕ ತಾಂತ್ರಿಕ ಜನತಾದಳದಿಂದ ಸುಪ್ರೀತ್ ಕುಮಾರ್ ಪೂಜಾರಿ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ವಿಜಯ ಶ್ರೀನಿವಾಸ ಸಿ., ಪಕ್ಷೇತರ ಪಕ್ಷದಿಂದ ಡಾ.ದೀಪಕ್ ರಾಜೇಶ್ ಕುವೆಲ್ಲೊ, ಪಕ್ಷೇತರ ಪಕ್ಷದಿಂದ ಮ್ಯಾಕ್ಸಿಂ ಪಿಂಟೋ, ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದಿಂದ ಮುುಹಮ್ಮದ್ ಇಲಿಯಾಸ್ ತುಂಬೆ, ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದಿಂದ ಇಸ್ಮಾಯೀಲ್ ಶಾಫಿ ಕೆ., ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಇದ್ದ ಗಡುವು ಪೂರ್ಣಗೊಂಡಿದ್ದು, ಮಾ.27ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಮಾ.29 ನಾಮಪತ್ರ ವಾಪಸ್ಗೆ ಕೊನೆಯ ದಿನವಾಗಿದೆ.