ಉಡುಪಿ: ಮಾ.27ರಂದು ವಿಶ್ವ ರಂಗಭೂಮಿ ದಿನಾಚರಣೆ
ಉಡುಪಿ, ಮಾ. 26: ರಂಗಭೂಮಿ ಉಡುಪಿ ಮತ್ತು ಜೇಸಿಐ ಕಲ್ಯಾಣಪುರ ಸಹಭಾಗಿತ್ವದಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ’ ಮಾ.27ರ ಸಂಜೆ 6ರಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಜಿಲ್ಲೆಯ ಕ್ರಿಯಾಶೀಲ ರಂಗತಂಡವಾದ ಲಾವಣ್ಯ ಬೈಂದೂರಿನ ವ್ಯವಸ್ಥಾಪಕ ಗಣೇಶ್ ಬೈಂದೂರು, ಪೂರ್ಣ ಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ಸುಕನ್ಯಾ ಫೆರ್ನಾಂಡಿಸ್ ಹಾಗೂ ಜೇಸಿಐ ಕಲ್ಯಾಣಪುರದ ಅಧ್ಯಕ್ಷ ಆಶಾ ಆಲೆನ್ ವಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ರಂಗಭೂಮಿಯ ಹಿರಿಯ ನಟ ಎನ್.ರಾಜಗೋಪಾಲ್ ಬಲ್ಲಾಳರಿಗೆ ರಂಗಸನ್ಮಾನ, ರಂಗಭೂಮಿ ತಂಡದ ಹೊಸ ನಾಟಕದ ಹೆಸರು ಅನಾವರಣ, ಬೆಂಗಳೂರಿನ ‘ಸರ್ವಂ’ ತಂಡದಿಂದ ‘ಹೇ ಸಿರಿ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ರಂಗಭೂಮಿಯ ಪತ್ರಿಕಾ ಪ್ರಕಟಣೆುಲ್ಲಿ ತಿಳಿಸಲಾಗಿದೆ.
Next Story