ಮಾ. 30: ಆರೋಗ್ಯವೇ ಭಾಗ್ಯ’ ಜನಜಾಗೃತಿ ಕಾರ್ಯಕ್ರಮ
ಉಡುಪಿ, ಮಾ.27: ಜಮೀಯ್ಯುತುಲ್ ಫಲಾಹ್ ಉಡುಪಿ ಘಟಕದ ವತಿಯಿಂದ ‘ಆರೋಗ್ಯವೇ ಭಾಗ್ಯ’ ಜನಜಾಗೃತಿ ಕಾರ್ಯಕ್ರಮವನ್ನು ಮಾ.30 ರಂದು ಸಂಜೆ 5ಗಂಟೆಗೆ ಉಡುಪಿ ಜಾಮೀಯ ಮಸೀದಿಯಲ್ಲಿ ಆಯೋಜಿಸ ಲಾಗಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಫೌಂಡೇಶನ್ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ‘ಆರೋಗ್ಯ ರಂಗದ ವ್ಯಾಪಾರೀ ಕರಣ, ಬಳಕೆದಾರರ ರಕ್ಷಣಾ ಕಾಯಿದೆ ಮತ್ತು ರೋಗಿಗಳ ಹಕ್ಕುಗಳು’ ಹಾಗೂ ಮಾನಸಿಕ ತಜ್ಞ ಡಾ.ವಿ.ಪಿ.ಭಂಡಾರಿ ‘ಮಾನಸಿಕ ಒತ್ತಡ ನಿವಾರಣೆಯ ವಿಧಾನಗಳು’ ಕುರಿತು ಮಾತನಾಡಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story