ಬೆಳಪುವಿನಲ್ಲಿ ಉಚಿತ ಹಿಜಾಮಾ ಶಿಬಿರ
ಪಡುಬಿದ್ರಿ: ಮಸ್ಜಿದ್ ಎ-ತೈಬಾ ಸಲಫಿ ಟ್ರಸ್ಟ್ ಬೆಳಪು ಇದರ ವತಿಯಿಂದ ಉಚಿತ ಹಿಜಾಮಾ ಶಿಬಿರ ಭಾನುವಾರ ನಡೆಯಿತು.
ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮಾಜಕಕೆ ಒಳತನ್ನು ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಯೂನುಸ್, ರಫೀಕ್ ಖಾನ್, ಕಲಿಮುಲ್ಲಾ ಉಸ್ತಾದ್, ಲತೀಫು ರಹ್ಮಾನ್, ಹಿದಾಯತುಲ್ಲಾ ಅಲ್ತಾಫ್ ಉಪಸ್ಥಿತರಿದ್ದರು.
ಖಾಲೀದ್ ಸ್ವಾಗತಿಸಿದರು. ಆಸೀಫ್ ವಂದಿಸಿದರು. ಸ್ವಾಲಿಹ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಆಸುಪಾಸಿನ ನಾಗರಿಕರು ಪ್ರಯೋಜನ ಪಡೆದುಕೊಂಡರು.
Next Story