ಮಂಗಳೂರು: ರಾಜ್ಯ ಸಾದಾತ್ ಅಸೋಸಿಯೇಶನ್ ಸಮಿತಿ ಅಸ್ತಿತ್ವಕ್ಕೆ
ಮಂಗಳೂರು: ರಾಜ್ಯದಲ್ಲಿರುವ ಪ್ರವಾದಿ ಮಹಮ್ಮದ್ ಸ್ಟಲ್ಲಲ್ಲಾಹು ಅಲೈಹಿವಸಲ್ಲಮರ ಪವಿತ್ರ ಕುಟುಂಬ ಪರಂಪರೆಗೆ ಸೇರಿದ ಸಾದಾತ್ಗಳ ಸಂಗಮವು ಇತ್ತೀಚೆಗೆ ಮಂಗಳೂರಿನಲ್ಲಿ ಜರುಗಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬೇರೆ ಬೇರೆ ಅಹ್ಲುಬೈತ್ ಖಬೀಲಗಳಿಗೆ ಸೇರಿದ ಸಾದಾತ್ಗಳು ಸಂಗಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಯ್ಯದ್ ಇಸ್ಮಾಈಲ್ ತಂಙಳ್ ಅಲ್ಹಾದಿ ಉಜಿರೆ ವಹಿಸಿದ್ದರು. ಸಯ್ಯಿದ್ ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಉದ್ಘಾಟಿಸಿದರು. ಸಂಗಮದ ರೂಪುರೇಷೆ ಹಾಗೂ ಸಂಘಟನೆಯ ಧ್ಯೇಯೋದ್ದೇಶವನ್ನು ಎಸ್ಎಸ್ಎಫ್ ರಾಜ್ಯಾಧ್ಯಕ್ಷರಾದ ಸಯ್ಯದ್ ಉಮರ್ ಅಸ್ಸಖಾಫ್ ತಂಙಳ್ ಮನ್ಶರ್ ಮಂಡಿಸಿದರು.
ಕಾರ್ಯಕ್ರಮದಲ್ಲಿ ಅಸೆಯ್ಯದ್ ಅಶ್ರಫ್ ಅಸ್ಸಖಾಫ್ ತಂಙಳ್ ಎಜ್ಯುಪಾರ್ಕ್ ಮುಡಿಪು, ಅಸೆಯ್ಯದ್ ಕೆಪಿಎಸ್ ಝೈನುಲ್ ಅಬಿದೀನ್ ಜಮಾಲುಲೈಲಿ ತಂಙಳ್ ಕಾಜೂರು, ಶುಭಾಶಂಸೆಗೈದರು.
ಈ ಸಂದರ್ಭದಲ್ಲಿ ರಾಜ್ಯದ ಸರ್ವ ಸಾದಾತ್ಗಳನ್ನು ಒಗ್ಗೂಡಿಸಲು ರಾಜ್ಯಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಗೌರವಾಧ್ಯಕ್ಷರಾಗಿ ಖುರ್ರತು ಸಾದಾತ್ ಅಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್, ಅಧ್ಯಕ್ಷರಾಗಿ ಅಸೈಯ್ಯದ್ ಎಪಿಎಸ್ ಹುಸೈನ್ ಆಟಕೋಯ ತಂಙಳ್ ಚಿಕ್ಕಮಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಅಸೈಯ್ಯದ್ ಅಬೂಬಕ್ಕರ್ ಸಿದ್ದೀಕ್ ತಂಙಳ್ ಆಲ್ಹಾದಿ ತೀರ್ಥಹಳ್ಳಿ, ಕೋಶಾಧಿಕಾರಿಯಾಗಿ ಅಸೈಯ್ಯದ್ ಅಶ್ರಫ್ ಅಸ್ಸಖಾಫ್ ತಂಙಳ್ ಎಜ್ಯುಪಾರ್ಕ ಮುಡಿಪು ಇವರು ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಅಸೈಯ್ಯದ್ ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಗುರುವಾಯನಕೆರೆ, ಅಸೈಯ್ಯದ್ ಕೆಪಿಎಸ್ ಝೈನುಲ್ ಅಬಿದೀನ್ ಜಮಾಲುಲೈಲೀ ತಂಙಳ್ ಕಾಜೂರು, ಅಸೈಯ್ಯದ್ ಇಸ್ಮಾಈಲ್ ತಂಙಳ್ ಅಲ್ಹಾದಿ ಉಜಿರೆ, ಅಸೈಯ್ಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಕುಂದಾಪುರ ಕಾರ್ಯದರ್ಶಿಗಳಾಗಿ ಅಸೈಯ್ಯದ್ ಉಮರ್ ಅಸ್ಸಖಾಫ್ ತಂಙಳ್ ಮನ್ಶರ್, ಅಸೈಯ್ಯದ್ ಅಲವೀ ಅಲ್ಬುಖಾರಿ ತಂಙಳ್ ಉತ್ತರಕನ್ನಡ, ಅಸೈಯ್ಯದ್ ಖುಬೈಬ್ ತಂಙಳ್ ಉಳ್ಳಾಲ, ಸಯ್ಯದ್ ಜಲಾಲುದ್ದೀನ್ ತಂಙಳ್ ಕುತ್ತಾರ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ: ಸಯ್ಯಿದ್ ಹಮೀದ್ ತಂಙಳ್ ಮರ್ದಾಳ, ಸಯ್ಯಿದ್ ಹಾಮೀನ್ ತಂಙಳ್ ಬಾಳೆಹೊನ್ನೂರು, ಸಯ್ಯಿದ್ ಫಝಲ್ ಜಮಾಲುಲೈಲಿ ತಂಙಳ್ ವಾದಿ ಇರ್ಫಾನ್ ಸಬರ್ಬೈಲ್, ಸಯ್ಯಿದ್ ಸಿಟಿಎಮ್ ಸೆಲೀಂ ತಂಙಳ್ ಕೆಸಿ ರೋಡ್, ಸಯ್ಯಿದ್ ಶಿಹಾಬುದ್ಧೀನ್ ತಂಙಳ್ ಕಿನ್ಯಾ, ಸಯ್ಯಿದ್ ಹಂಝ ತಂಙಳ್ ಕರ್ಪಾಡಿ, ಸಯ್ಯಿದ್ ಶರಫುದ್ದೀನ್ ತಂಙಳ್ ಕೊಡಗು, ಸಯ್ಯಿದ್ ಇಸ್ಹಾಕ್ ತಂಙಳ್ ಕಣ್ಣೂರು, ಸಯ್ಯಿದ್ ಹಬೀಬುಲ್ಲಾಹಿ ತಂಙಳ್ ಕುಪ್ಪೆಟ್ಟಿ, ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಕಿನ್ಯಾ, ಸಯ್ಯಿದ್ ಮುಸ್ತಾಕ್ ತಂಙಳ್ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಎಪಿಎಸ್ ಹುಸೈನ್ ಆಟಕೋಯ ತಂಙಳ್ ಸ್ವಾಗತಿಸಿ, ಅಸೈಯ್ಯದ್ ಅಲವೀ ತಂಙಳ್ ವಂದಿಸಿದರು.