ಬಂಟ್ವಾಳ: ಬಿಜೆಪಿ ಪೇಜ್ ಪ್ರಮುಖರ, ಕಾರ್ಯಕರ್ತರ ಸಮಾವೇಶ
ಬಂಟ್ವಾಳ, ಮಾ. 29: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರ, ಇಂಜಿನಿಯರ್ ಮನೆಗಳಿಗೆ ದಾಳಿ ಮಾಡಿದರೆ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಅವರು ಬೆಂಗಳೂರಿನಲ್ಲಿ ಸತ್ಯಾಗ್ರಹ ಮಾಡುವುದು ಯಾಕೆ ? ಎಂದು ಬಿಜೆಪಿ ರಾಜ್ಯ ನಾಯಕ ಆಯನೂರು ಮಂಜುನಾಥ ಪ್ರಶ್ನಿಸಿದ್ದಾರೆ.
ಶುಕ್ರವಾರ ಬಿ.ಸಿ.ರೋಡಿನಲ್ಲಿ ನಡೆದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಪೇಜ್ ಪ್ರಮುಖರ ಮತ್ತು ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಮೈತ್ರಿಗೆ ಉಳಿಗಾಲವಿಲ್ಲವೆಂಬ ಕಾರಣಕ್ಕೆ ಎಲ್ಲರೂ ಒಟ್ಟಾಗಿ ಬೀದಿಗಿಳಿದಿದ್ದಾರೆ ಎಂದರು.
ಜಾತಿ, ಹಣಬಲವಿಲ್ಲದೆ ಆಗಸದೆತ್ತರಕ್ಕೆ ಬೆಳೆದಿರುವ ಸಾಮಾನ್ಯ ಕಾರ್ಯಕರ್ತ ನರೇಂದ್ರ ಮೋದಿಯ ಬಗ್ಗೆ ವಿಪಕ್ಷಗಳು ಹಗುರವಾಗಿ ಮಾತನಾಡಿಕೊಳ್ಳುತ್ತಿ ದ್ದರೆ, ಪ್ರಪಂಚದ ಸರ್ವರಾಷ್ಟ್ರಗಳು ಮೋದಿಯ ಸಾಧನೆಯನ್ನು ಶ್ಲಾಘಿಸುವುದರ ಜೊತೆಗೆತಮ್ಮ ದೇಶಕ್ಕೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿದೆ ಎಂದ ಅವರು, ಈ ಬಾರಿಯ ಲೋಕಸಭಾ ಚುನಾವಣೆ ದೇಶದ ಭದ್ರತೆ, ಪ್ರಗತಿ, ರಾಷ್ರ್ರೀಯ ಹಿತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮುನ್ನಡೆ ಯುವ ಚುನಾವಣೆಯಾಗಿದೆ ಎಂದರು.
ಕಣ್ಣೀರು ಮುಕ್ತ ಕರ್ನಾಟಕ:
ಪ್ರತಿ ವಿಚಾರದಲ್ಲೂ ಕಣ್ಣೀರು ಸುರಿಸಿ ನಾಟಕವಾಡುವ ಸಿಎಂ ಕುಮಾರಸ್ವಾಮಿ ಸಹಿತ ಜೆಡಿಎಸ್ ಮುಖಂಡರಿಂದ" ಕಣ್ಣೀರು ಮುಕ್ತ ಕರ್ನಾಟಕ" ವನ್ನಾಗಿಸಬೇಕು. ದ.ಕ.ಜಿಲ್ಲೆಯಲ್ಲಿ ಸೂತ್ರ, ಶಾಸ್ತ್ರದ ಮೂಲಕ ಸಂಘಟನೆಯನ್ನು ಕಟ್ಟಿರುವ ಕಾರ್ಯಕರ್ತರ ಪರಿಶ್ರಮದ ಫಲವಾಗಿ ದಾಖಲೆಯ ಮತಗಳ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಸಂಸದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಶಾಸಕರಾದ ಯು.ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ, ಹರೀಶ್ ಪೂಂಜಾ, ಮಾಜಿ ಶಾಸಕರಾದ ರುಕ್ಮಯಪೂಜಾರಿ, ಯೋಗೀಶ್ ಭಟ್, ಪದ್ಮನಾಭ ಕೊಟ್ಟಾರಿ, ನಾಗರಾಜ ಶೆಟ್ಟಿ, ಕ್ಯಾ. ಗಣೇಶ್ ಕಾರ್ಣಿಕ್, ಪ್ರಭಾರಿ ಪ್ರತಾಪಸಿಂಹ ನಾಯಕ್, ಜಿಲ್ಲಾ ಚುನಾವಣಾ ಸಂಚಾಲಕ ಗೋಪಾಲಕೃಷ್ಣ ಹೇರಳೆ, ತಾಲೂಕು ಸಂಚಾಲಕ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಎಸ್ಸಿ ಮೋರ್ಚಾಅಧ್ಯಕ್ಷ ದಿನೇಶ್ ಅಮ್ಟೂರು, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕ್ಯಾ.ಬ್ರಿಜೇಶ್ ಚೌಟ,ಸುದರ್ಶನ್ ಮೂಡಬಿದಿರೆ, ಕಾರ್ಯದರ್ಶಿ ಸುಗುಣ ಕಿಣಿ, ರವಿಶಂಕರ್ ಮಿಜಾರ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ ವಂದಿಸಿದರು. ರಾಮದಾಸ್ ಬಂಟ್ವಾಳ ನಿರೂಪಿಸಿದರು. ಇದೇ ವೇಳೆ ಅಮ್ಟಾಡಿ ಗ್ರಾಪಂ ಸದಸ್ಯ ನವೀನ್ ಸಹಿತ ಹಲವರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿದರು.
ಪ್ರಮೋದ್ಗೆ ಕಾಂಗ್ರೆಸ್ನ ಸೀರೆ, ಜೆಡಿಎಸ್ ತಾಳಿ
ಮತ್ತೊಮ್ಮೆ ಪ್ರಧಾನಿಯಾಗುವ ಕನಸಿನಲ್ಲಿರುವ ದೇವೇಗೌಡರ ಜೆಡಿಎಸ್ ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆಯಿಂದ ತಾವು ಸಹಿತ ಇಬ್ಬರು ಮೊಮ್ಮಕ್ಕಳಿಗೆ ಟಿಕೆಟ್ ನೀಡಿದರೆ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಮೋದ್ ಅವರನ್ನು ಕರೆತಂದು ಟಿಕೆಟ್ ನೀಡಲಾಗಿದೆ. ಪ್ರಮೋದ್ ಅವರಿಗೆ ಸದ್ಯ ಕಾಂಗ್ರೆಸ್ನ ಸೀರೆ, ಜೆಡಿಎಸ್ನ ತಾಳಿ ಎಂಬಂತಾಗಿದೆ ಎಂದು ವ್ಯಂಗ್ಯವಾಡಿದರು.