ದ.ಕ. ಲೋಕಸಭಾ ಕ್ಷೇತ್ರ: ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು
ಮಂಗಳೂರು, ಮಾ.29: ದ.ಕ. ಲೋಕಸಭಾ ಕ್ಷೇತ್ರದ ಚುನಾವಣೆಗೆ 15 ಅಭ್ಯರ್ಥಿಗಳಿಂದ 24 ನಾಮಪತ್ರ ಸಲ್ಲಿಕೆಯಾಗಿ, ಎರಡು ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ನಾಮಪತ್ರ ವಾಪಸ್ಗೆ ಕೊನೆಯ ದಿನವಾದ ಶುಕ್ರವಾರ ಓರ್ವ ನಾಮಪತ್ರ ಹಿಂದೆಗೆದುಕೊಂಡಿದ್ದು, ಅಂತಿಮವಾಗಿ ಕಣದಲ್ಲಿ 13 ಅಭ್ಯರ್ಥಿಗಳಿದ್ದಾರೆ.
ಅಭ್ಯರ್ಥಿ ಹೆಸರು- ಪಕ್ಷ - ಚಿಹ್ನೆ
* ನಳಿನ್ ಕುಮಾರ್ ಕಟೀಲ್- ಬಿಜೆಪಿ- ಕಮಲ
* ಮಿಥುನ್ ಎಂ. ರೈ- ಕಾಂಗ್ರೆಸ್- ಕೈ
* ಎಸ್.ಸತೀಶ್ ಸಾಲ್ಯಾನ್- ಬಿಎಸ್ಪಿ- ಆನೆ
* ಮುಹಮ್ಮದ್ ಇಲ್ಯಾಸ್ ತುಂಬೆ- ಎಸ್ಡಿಪಿಐ- ಗ್ಯಾಸ್ ಸಿಲಿಂಡರ್
* ವಿಜಯ ಶ್ರೀನಿವಾಸ್ ಸಿ.- ಉತ್ತಮ ಪ್ರಜಾಕೀಯ ಪಾರ್ಟಿ- ಆಟೋ ರಿಕ್ಷಾ
* ಸುಪ್ರೀತ್ಕುಮಾರ್ ಪೂಜಾರಿ- ಹಿಂದುಸ್ಥಾನ ಜನತಾ ಪಾರ್ಟಿ- ಹೂಕೋಸು
* ಅಬ್ದುಲ್ ಹಮೀದ್- ಪಕ್ಷೇತರ -ಚಾವಿ (ಕೀ)
* ಅಲೆಗ್ಸಾಂಡರ್- ಪಕ್ಷೇತರ- ವಜ್ರ
* ದೀಪಕ್ ರಾಜೇಶ್ ಕುವೆಲ್ಲೊ- ಪಕ್ಷೇತರ- ಡೀಸೆಲ್ ಪಂಪ್
* ಮುಹಮ್ಮದ್ ಖಾಲಿದ್- ಪಕ್ಷೇತರ- ಪ್ರೆಶರ್ ಕುಕ್ಕರ್
* ಮ್ಯಾಕ್ಸಿಂ ಪಿಂಟೊ- ಪಕ್ಷೇತರ- ಮಡಿಕೆ
* ವೆಂಕಟೇಶ್ ಬೆಂಡೆ- ಪಕ್ಷೇತರ- ಕಹಳೆ ಊದುತ್ತಿರುವ ಮನುಷ್ಯ
* ಎಚ್.ಸುರೇಶ್ ಪೂಜಾರಿ- ಪಕ್ಷೇತರ- ಬ್ಯಾಟ್