ತಲಪಾಡಿ: ಮಾ.31ರಂದು ತಖ್'ನಿಯಾ ಕ್ಯಾಂಪ್
ಮಂಗಳೂರು, ಮಾ.30: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೆಶನ್(ಎಸ್ಸೆಸ್ಸೆಫ್) ಉಳ್ಳಾಲ ಡಿವಿಶನ್ ವತಿಯಿಂದ ಮಾ.31ರಂದು ನಾಯಕತ್ವ ತರಬೇತಿ ಕಾರ್ಯಾಗಾರ ತಲಪಾಡಿ ಮದ್ರಸ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9:30ರಿಂದ ಸಂಜೆ 4:30ರವರೆಗೆ ನಡೆಯುವ ಶಿಬಿರವನ್ನು ಎಸ್ಸೆಸ್ಸೆಫ್ ಸುಪ್ರೀಂ ಕೌನ್ಸಿಲ್ ಚೆಯರ್ ಮ್ಯಾನ್ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಉದ್ಘಾಟಿಸುವರು. ಡಿವಿಶನ್ ಅಧ್ಯಕ್ಷ ಸಯ್ಯದ್ ಖುಬೈಬ್ ತಂಙಳ್ ಅಧ್ಯಕ್ಷತೆ ವಹಿಸುವರು.
ಇಬ್ರಾಹಿಮ್ ಸಖಾಫಿ ಕೂಟೂರು ತರಬೇತಿಯನ್ನು ನೀಡುವರು.
ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ಕನ್ವಿನರ್ ಮುಸ್ತಫಾ ಮಾಸ್ಟರ್, ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಹಾಗೂ
ಉಳ್ಳಾಲ ಡಿವಿಶನ್ ವ್ಯಾಪ್ತಿಯ 54 ಶಾಖೆಗಳ, 6 ಸೆಕ್ಟರ್ ಗಳ ಪದಾಧಿಕಾರಿಗಳು, ಡಿವಿಶನ್ ನ 15 ಉಪ ಸಮಿತಿಗಳ ಕನ್ವಿನರ್ ಗಳು ಮತ್ತು 16 ಕಾರ್ಯಕಾರಿ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಡಿವಿಶನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ತಲಪಾಡಿ, ಕ್ಯಾಂಪ್ ಅಮೀರ್ ಇರ್ಫಾನ್ ನೂರಾನಿ ಉಪಸ್ಥಿತರಿರುವರು ಎಂದು ಕ್ಯಾಂಪ್ ಉಪ ಕನ್ವಿನರ್ ಜಾಫರ್ ಯು.ಎಸ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ