ಉಪನ್ಯಾಸಕ ಸಂದೀಪ್ಕುಮಾರ್ಗೆ ‘ಕನ್ನಡ ರತ್ನಶ್ರೀ’ ಪ್ರಶಸ್ತಿ
ಕುಂದಾಪುರ, ಮಾ. 30: ಸ್ಥಳೀಯ ಬ್ಯಾರೀಸ್ ಕಾಲೇಜಿನ ಕನ್ನಡ ಉಪನ್ಯಾಸಕ ಸಂದೀಪ್ ಕುಮಾರ್ ಶೆಟ್ಟಿ ಇವರಿಂದ ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಹಿತ್ಯ ಪ್ರತಿಷ್ಠಾನ ನೀಡುವ ‘ಕನ್ನಡ ರತ್ನಶ್ರೀ-2019’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಆತ್ಮಶ್ರೀ ಕನ್ನಡ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಸ್.ದೊರೆಸ್ವಾಮಿ, ಜೇಸಿ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪತ್ರವನ್ನು ವಾಚಿಸಿದ ಪ್ರತಿಷ್ಠಾನದ ಸಂಘಟಕರಾದ ಗುಣವಂತ ಅವರು, ಸಂದೀಪ್ ಕುಮಾರ್ ಶೆಟ್ಟಿ ಅವರ ಈವರೆಗಿನ ಸಾಧನೆ, ಕನ್ನಡ ಪರ ಕಾಳಜಿಗೆ ಹಾಗೂ ಇಂಗ್ಲೀಷ್ ಪದವನ್ನು ಬಳಸದೇ ಶುದ್ಧ ಕನ್ನಡದಲ್ಲೇ ಮಾತನಾಡುವ ವೈಖರಿಗೆ ಪ್ರಶಸ್ತಿ ನೀಡಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿ ಕನ್ನಡ ಟಿವಿಯ ಕಾಮಡಿ ಕಿಲಾಡಿಗಳು ಖ್ಯಾತಿಯ ನಯನ, ಜಯಶ್ರೀ ಕಾರ್ಗಿಲ್, ನಿವೃತ್ತ ಯೋಧರಾದ ಜಯದೇವ, ಮಂಜು ಮುಂತಾದವರು ಉಪಸ್ಥಿತರಿದ್ದರು.
Next Story