ಬೈಕ್ ಕಳವು ಪ್ರಕರಣ: ಇಬ್ಬರ ಬಂಧನ
ಮಂಗಳೂರು, ಮಾ. 30: ನಗರದಲ್ಲಿ ಬಂದರು ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂದರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೇರಳದ ಮಲ್ಲಪ್ಪುರಂ ನಿವಾಸಿ ಸುಲೈಮಾನ್ (22) ಮತ್ತು ಅಶ್ರ್ (19) ಬಂಧಿತ ಆರೋಪಿಗಳು.
ಆರೋಪಿಗಳು ಬೈಕ್ ಕಳವಿಗೆ ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಮೂರು ಕೆಟಿಎಂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಬೈಕ್ಗಳಲ್ಲಿ ಎರಡು ಬಂದರು ಠಾಣಾ ವ್ಯಾಪ್ತಿಯಲ್ಲಿ ಕಳವಾಗಿದ್ದರೆ, ಒಂದು ಮೈಸೂರು ವ್ಯಾಪ್ತಿಯಲ್ಲಿ ಕಳವಾಗಿತ್ತು.
ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಬೈಕ್ ಕಳವು ಪ್ರಕರಣದಲ್ಲಿ ಇನ್ಯಾರು ಭಾಗಿಯಾಗಿದ್ದಾರೆಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.
ಕಾರ್ಯಾಚರಣೆಯಲ್ಲಿ ಬಂದರು ಇನ್ಸ್ಪೆಕ್ಟರ್ ಗೋವಿಂದರಾಜ್, ಪಿಎಸ್ಐ ಪ್ರದೀಪ್, ಎಎಸ್ಐ ಅನಂತ ಮುರ್ಡೇಶ್ವರ, ಎಎಸ್ಸೈ ಪದ್ಮನಾಭ, ದಯಾನಂದ, ರೆಡ್ಡಿ, ಮಹಾದೇವ್, ಬಸವರಾಜ್, ರಮೇಶ್ ಭಾಗವಹಿಸಿದ್ದರು.
Next Story