ಮತದಾನ ಜಾಗೃತಿಗಾಗಿ ಸಿಟಿ ಸೆಂಟರ್ನಲ್ಲಿ ಫ್ಲ್ಯಾಶ್ ಮಾಬ್
ಮಂಗಳೂರು, ಮಾ. 31: ದ.ಕ. ಜಿಲ್ಲಾ ಸ್ವೀಪ್ ಸಮಿತಿಯು ಮತದಾರರನ್ನು ಮತದಾನ ಕೇಂದ್ರದತ್ತ ಸೆಳೆಯಲು ನಡೆಸುವ ಪ್ರಯತ್ನದ ಭಾಗವಾಗಿ ಮತ್ತು ಯುವ ಮತದಾರರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವ ತಿಳಿಸಲು ಶನಿವಾರ ಸಂಜೆ ನಗರದ ಸಿಟಿ ಸೆಂಟರ್ನಲ್ಲಿ ‘ಫ್ಲಾಶ್ ಮಾಬ್’ ಕಾರ್ಯಕ್ರಮ ಆಯೋಜಿಸಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸ್ವೀಪ್ ಸಮಿತಿಯ ಅಧ್ಯಕ್ಷರಾಗಿರುವ ಜಿಪಂ ಸಿಇಒ ಡಾ ಸೆಲ್ವಮಣಿ ಆರ್. ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವ ಮತದಾರರು ತಮ್ಮ ಹಕ್ಕು ಹಾಗೂ ಮತದಾನದ ಕರ್ತವ್ಯವನ್ನು ಚಲಾಯಿಸಲು ಹುರಿದುಂಬಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ಯುವಕರು ಯಾವುದೇ ಕಾರಣಕ್ಕೂ ಎಪ್ರಿಲ್ 18ರಂದು ನಡೆಯಲಿರುವ ಮತದಾನದಿಂದ ಹೊರಗುಳಿಯಬಾರದು ಎಂದು ಕರೆ ನೀಡಿದರು.
ಶ್ರೀನಿವಾಸ ಕಾಲೇಜಿನ ಪ್ರಾಂಶುಪಾಲ ಡಾ. ಅಜಯ್, ರಿಜಿಸ್ಟ್ರಾರ್ ಡೆವಲಪ್ಮೆಂಟ್ ಡಾ. ರಾಜಶೇಖರ್, ಡಾ. ತೃಶಾಲ್, ಮನಪಾ ಅಧಿಕಾರಿಗಳು ಪಾಲ್ಗೊಂಡಿದ್ದರು.
Next Story