ಕುಂದಾಪುರ ಸಂತೆಯಲ್ಲಿ ‘ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’ ಅಭಿಯಾನ
ಉಡುಪಿ, ಮಾ.31: ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ (ನಮ್ಮ ಭೂಮಿ), ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಸಹಯೋಗದಲ್ಲಿ ‘ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’ ಗೌರವಾನ್ವಿತ ಮತದಾರರ ಸ್ವಾಭಿಮಾನಿ ಆಂದೋಲನವನ್ನು ಶನಿವಾರ ಕುಂದಾ ಪುರದ ವಾರದ ಸಂತೆಯಲ್ಲಿ ನಡೆಯಿತು.
ನಮ್ಮ ಭೂಮಿ ಕಾರ್ಯಕರ್ತರು ಹಾಗೂ ವೃತ್ತಿಪರ ತರಬೇತಿಯ ಮಕ್ಕಳು ‘ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’, ‘ನನ್ನ ಮತ ನಮ್ಮ ಹೆಮ್ಮೆ’ ಪೋಸ್ಟರ್, ಬ್ಯಾಡ್ಜ್, ಸ್ಟಿಕ್ಕರ್ ಹಾಗೂ ಮತದಾನದ ಕುರಿತ ಮಾಹಿತಿಯ ಕರಪತ್ರಗಳನ್ನು ವ್ಯಾಪಾರಿಗಳು, ಗ್ರಾಹಕರು, ಆಟೋಚಾಲಕರು, ದ್ವಿಚಕ್ರ ವಾಹನ ಸವಾರರು, ಸರಕು ಸಾಗಾಟ ವಾಹನದ ಮಾಲೀಕರು, ಚಾಲಕರು ಹಮಾಲಿಗಳಿಗೆ ಮತ ದಾನದ ಪ್ರಾುುಖ್ಯತೆಯ ಬಗ್ಗೆ ಹೇಳಿ ವಿತರಿಸಿದರು.
ನಾವು ತರಕಾರಿಗಳನ್ನು ಮಾರುತ್ತೇವೆ, ಮತವನ್ನು ಮಾರುವುದಿಲ್ಲ. ಇಲ್ಲಿ ಕಬ್ಬಿನ ಹಾಲು ಮಾರಾಟಕ್ಕಿದೆ, ಮತ ಮಾರಾಟಕ್ಕಿಲ್ಲ, ನೋಡಿ ಕೊಳ್ಳಿರಿ ಹಣ್ಣುಗಳನ್ನು ಆರೋಗ್ಯಕ್ಕಾಗಿ, ನೋಡಿ ಮತ ನೀಡಿ ದೇಶದ ಆರೋಗ್ಯಕ್ಕಾಗಿ ಎಂಬ ಪ್ಲಕಾರ್ಡ್ ಗಳನ್ನು ವ್ಯಾಪಾರಸ್ಥರು ತಾವು ಮಾರಾಟ ಮಾಡುವ ವಸ್ತುಗಳ ಮಧ್ಯದಲ್ಲಿಯೇ ಇಟ್ಟುಕೊಂಡು ಗ್ರಾಹಕರಿಗೆ ಅದರ ಬಗ್ಗೆ ತಿಳಿ ಹೇಳಿದರು.
‘ಗೆದ್ದು ಬಂದವರು ನಮಗೆ ಎನೂ ಮಾಡದಿದ್ದರೂ ಪರವಾಗಿಲ್ಲ. ನಾವು ಮತದಾನ ಮಾಡಲೇ ಬೇಕು. ಇಲ್ಲವಾದರೆ ನಮ್ಮ ಮತ ಹಾಳು ಆಗುತ್ತದೆ. ಈವರೆಗೆ ಯಾವುದೇ ಮತದಾನವನ್ನು ತಪ್ಪಿಸಿಲ್ಲ. ಈ ಬಾರಿಯೂ ಮತ ಹಾಕು ತ್ತೇನೆ. ಮತಕ್ಕಾಗಿ ಈವರೆಗೆ ಹಣ ತೆಗೆದುಕೊಂಡಿಲ್ಲ. ಮುಂದೆಯೂ ತೆಗೆದು ಕೊಳ್ಳುವುದಿಲ್ಲ’ ಎಂದು ವ್ಯಾಪಾರಸ್ಥರು ತಿಳಿಸಿದರು.
ಈ ಸಂದರ್ಭದಲ್ಲಿ ನಮ್ಮಭೂಮಿಯ ಪ್ರಭಾಕರ್ ನಾಯ್ಕ, ಕೃಷ್ಣ ಪೂಜಾರಿ, ಸುರೇಶ್ ಗೌಡ, ಶ್ರೀನಿವಾಸ ಗಾಣಿಗ, ಶಿವಲಿಂಗಪ್ಪ, ಸಾಕು, ಮಲ್ಲಿಕಾ ನಮೃತಾ ಹಾಗೂ ನಮ್ಮಭೂಮಿಯ ವೃತ್ತಿ ತರಬೇತಿಯ ಮಕ್ಕಳು ಭಾಗವಹಿಸಿದ್ದರು.