ಪಿ.ಎ. ಕಾಲೇಜ್ನ 'ಸಿಬ್ಬಂದಿ ಸಮ್ಮಿಲನ 2019' ರಲ್ಲಿ ಸಾಧಕರಿಗೆ ಸನ್ಮಾನ
ಕೊಣಾಜೆ: ಪಿ.ಎ ಎಜುಕೇಶನಲ್ ಟ್ರಸ್ಟ್ ಇದರ “ಸಿಬ್ಬಂದಿ ಸಮ್ಮಿಲನ 2019” ಕಾರ್ಯಕ್ರಮವು ಮಂಗಳೂರಿನ ಪೇಸ್ ಕ್ಯಾಂಪಸ್ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪೇಸ್ ಗ್ರೂಪ್ ಚೆಯರ್ ಮ್ಯಾನ್ ಡಾ. ಪಿ.ಎ ಇಬ್ರಾಹಿಂ ಹಾಜಿ ಅವರ ಶೈಕ್ಷಣಿಕ, ಉದ್ಯಮ ಮತ್ತು ಸಾಮಾಜಿಕ ಕ್ಷೇತ್ರಗಳ ಸಾಧನೆಗಳಿಗಾಗಿ ಸನ್ಮಾನಿಸಲಾಯಿತು. ವಾಸ್ತುಶಿಲ್ಪ ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ ಪ್ರಸಿದ್ಧ ವಾಸ್ತುಶಿಲ್ಪಿ ಸುನಿಲ್ ಸಡೆಕರ್ ಅವರನ್ನು ಹಾಗೂ ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪಿ.ಎ ಎಜುಕೇಶನ್ ಟ್ರಸ್ಟ್ ನ 18 ಪ್ರಾಧ್ಯಾಪಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಪಿ.ಎ ಇಬ್ರಾಹಿಂ ಹಾಜಿ, ಎಲ್ಲಾ ಪ್ರಾದ್ಯಾಪಕರು ತಮ್ಮನ್ನು ಸಂಶೋಧನೆಯಲ್ಲಿ ತೊಡಗಿಸಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆಯನ್ನು ನೀಡಬೇಕಾಗಿ ಕರೆ ನೀಡಿದರು. ಪಿ.ಎ.ಅಬ್ದುಲ್ಲಾ ಇಬ್ರಾಹಿಂ, ಕಾರ್ಯನಿರ್ವಾಹಕ ನಿರ್ದೇಶಕರು ಪಿ.ಎ. ಎಜುಕೇಶನಲ್ ಟ್ರಸ್ಟ್, ಸುನಿಲ್ ಸಡೆಕರ್ ವಾಸ್ತುಶಿಲ್ಪಿ, ಡಾ. ಅಬ್ದುಲ್ ಶರೀಫ್ ಪ್ರಾಂಶುಪಾಲರು, ಪಿ.ಎ ಇಂಜಿನಿಯರಿಂಗ್ ಕಾಲೇಜು,ಪ್ರೊ. ಕೆ.ಪಿ.ಸೂಫಿ, ಪ್ರಾಂಶುಪಾಲರು ಪಿ.ಎ ಪಾಲಿಟೆಕ್ನಿಕ್, ಡಾ. ಸಲಿಮುಲ್ಲಾ ಖಾನ್, ಪ್ರಾಂಶುಪಾಲರು, ಪಿ.ಎ. ಕಾಲೇಜ್ ಆಫ್ ಫಾರ್ಮಸಿ, ಡಾ. ಲತಾ ಕೃಷ್ಣನ್ ನಿರ್ದೇಶಕರು, ಎಂ.ಬಿ.ಎ. ವಿಭಾಗ, ಪ್ರೊ. ಝೊಹರಾ ಅಬ್ಬಾಸ್, ಪ್ರಾಂಶುಪಾಲರು, ಪಿ.ಎ ಪ್ರಥಮ ದರ್ಜೆ ಕಾಲೇಜು ಅವರು ಈ ಸಂದರ್ಭ ಮಾತನಾಡಿದರು.
ಪ್ರೊ. ಝಿಶಾನ್ ಖಿರಾಅತ್ ಪಠಿಸಿದರು. ಡಾ. ಸರ್ಫ್ರಾಝ್ ಜೆ.ಹಾಸಿಂ, ಶೈಕ್ಷಣಿಕ ನಿರ್ದೇಶಕರು, ಪಿ.ಎ ಎಜುಕೇಶನ್ ಟ್ರಸ್ಟ್ ಇವರು ಸ್ವಾಗತಿಸಿದರು. ಡಾ. ರಮೀಝ್ ಎಂ.ಕೆ. ಉಪಪ್ರಾಂಶುಪಾಲರು ವಂದಿಸಿದರು. ಪ್ರೊ. ಅಜಿತ್ ವಾಸು ಕಾರ್ಯಕ್ರಮ ನಿರ್ವಹಿಸಿದರು.