ಎಪ್ರಿಲ್ ಫೂಲ್ ಬದಲು ಎಪ್ರಿಲ್ ಕೂಲ್ ಮಾಡಿ !
ಜನಮನ ಗೆದ್ದ ಬ್ಯಾರೀಸ್ ಇಂಜಿನಿಯರಿಂಗ್ ಕಾಲೇಜಿನ ಪರಿಸರ ಕಾಳಜಿಯ ಕರೆ
ಮಂಗಳೂರು, ಎ.1: ಎಪ್ರಿಲ್ 1ನ್ನು ಹೆಚ್ಚಿನವರು ‘ಮೂರ್ಖರ ದಿನ’ ಎಂದು ಆಚರಿಸುತ್ತಾರೆ. ಯಾರನ್ನೋ ಗೇಲಿ ಮಾಡುವುದು, ಮೂರ್ಖರಾಗಿಸುವುದು, ತಮಾಷೆ ನೋಡುವುದು ಇತ್ಯಾದಿ ಆ ದಿನ ಸರ್ವೇ ಸಾಮಾನ್ಯ. ಆದರೆ ಮಂಗಳೂರಿನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ), ಬ್ಯಾರೀಸ್ ಎನ್ವೀರೊ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್(ಬೀಡ್ಸ್) ಕಾಲೇಜುಗಳು ಎಪ್ರಿಲ್ ಒಂದರಂದು ನೀಡಿರುವ ‘ಎಪ್ರಿಲ್ ಫೂಲ್ ಬದಲು ಎಪ್ರಿಲ್ ಕೂಲ್ ಮಾಡಿ!’ ಎಂಬ ಪರಿಸರ ಕಾಳಜಿಯ ಸಂದೇಶಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಇದು ಇನೋಳಿಯಲ್ಲಿರುವ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ ನಲ್ಲಿ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ), ಬಿಐಟಿ ಪಾಲಿಟೆಕ್ನಿಕ್ ಮತ್ತು ಬ್ಯಾರೀಸ್ ಎನ್ವೀರೊ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್(ಬೀಡ್ಸ್) ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ‘ಬಿಐಟಿ ಮತ್ತು ಬಿಡ್ಸ್ ಉತ್ಸವ-2019’ದ ವೇದಿಕೆಯಲ್ಲಿ ಬೋರ್ಡ್ ನ ಭಾಗ.
ಎಪ್ರಿಲ್ 1ನ್ನು ಮೂರ್ಖರ ದಿನವೆಂದು ಯಾರನ್ನೋ ಮೂರ್ಖರನ್ನಾಗಿಸುವ ಬದಲು ಒಂದು ಗಿಡ ನೆಡುವ ಮೂಲಕ ಪರಿಸರ ಕಾಳಜಿ ತೋರುವಂತೆ ಮನವಿ ಮಾಡಿರುವ ಸಂದೇಶವುಳ್ಳ ಈ ಬೃಹತ್ ಹೋರ್ಡಿಂಗ್ ಎಲ್ಲರ ಗಮನ ಸೆಳೆದಿತ್ತು. ಸಾಮಾಜಿಕ ಜಾಲತಾಣದಲ್ಲೂ ಇದನ್ನು ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸಲಾಗಿದೆ. ಬಿಐಟಿ ಹಾಗೂ ಬೀಡ್ಸ್ ನ ಈ ಪರಿಸರ ಕಾಳಜಿಯ ಸಂದೇಶ ಇದೀಗ ವೈರಲ್ ಆಗಿದ್ದು, ಜನಮೆಚ್ಚುಗೆ ಗಳಿಸಿದೆ.