ಮಣಿಪಾಲ: ಪೊಲೀಸ್ ವಶದಿಂದ ತಪ್ಪಿಸಿಕೊಂಡ ಅತ್ಯಾಚಾರ, ಕೊಲೆ ಆರೋಪಿ ಸೆರೆ
ಮಣಿಪಾಲ, ಎ.1: ಜೈಲಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಮೂಡು ಸಗ್ರಿ ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿ ಬಾದಾಮಿ ತಾಲೂಕಿನ ಹನುಮಂತ ಬಸಪ್ಪ ಕಂಬಳಿ (39)ಯನ್ನು ಹಿರಿಯಡ್ಕ ಸಮೀಪದ ಪೆರ್ಣಂಕಿಲ ಹಾಡಿಯಲ್ಲಿ ಎ.1 ರಂದು ಸಂಜೆ 6:45ರ ಸುಮಾರಿಗೆ ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾ. 30ರಂದು ಬಂಧಿಸಲ್ಪಟ್ಟ ಹುನುಮಂತನನ್ನು ಮಣಿಪಾಲ ಪೊಲೀಸರು ಮಾ.31ರಂದು ಸಂಜೆ 6:15ರ ಸುಮಾರಿಗೆ ಜಿಲ್ಲಾ ಪ್ರಭಾರ ನ್ಯಾಯಾಧೀಶ ರಾದ ಕುಂದಾಪುರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಪೊಲೀಸರು ಬಳಿಕ ಆತನನ್ನು ಹಿರಿಯಡ್ಕ ಕಾರಾಗೃಹಕ್ಕೆ ಪೊಲೀಸ್ ವಾಹನಲ್ಲಿ ಕರೆದುಕೊಂಡು ಹೋಗಿದ್ದರು.
ಕಾರಾಗೃಹದ ಮುಖ್ಯ ದ್ವಾರದ ಬಳಿ ವಾಹನ ತಿರುವು ಪಡೆಯಲು ನಿಧಾನ ಗತಿಯಲ್ಲಿ ಚಲಾಯಿಸಿದಾಗ ಸಂಜೆ 7:15ರ ಸುಮಾರಿಗೆ ಆರೋಪಿ ಹನು ಮಂತ ಬೆಂಗಾವಲು ಸಿಬ್ಬಂದಿಯನ್ನು ತಳ್ಳಿ ಜೀಪಿನ ಬಾಗಿಲಿನಿಂದ ಹೊರ ನೆಗೆದು ಕಾಡಿನೊಳಗೆ ಓಡಿ ತಪ್ಪಿಸಿಕೊಂಡು ಪರಾರಿಯಾದನು. ಈ ಬಗ್ಗೆ ಪ್ರಕರಣದ ತನಿಖಾಧಿಕಾರಿ ಮಣಿಪಾಲ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಟ್ಟೆ ಬದಲಾಯಿಸಿದ ಆರೋಪಿ: ಅಲ್ಲಿಂದ ತಪ್ಪಿಸಿಕೊಂಡು ಕಾಡಿನಲ್ಲಿ ಮರೆಯಾದ ಹನುಮಂತ, ತಾನು ಹಾಕಿದ ಹಳದಿ ಬಣ್ಣದ ಶರ್ಟ್ ಮತ್ತು ಚಪ್ಪಲಿಯನ್ನು ದಾರಿ ಮಧ್ಯೆ ಎಸೆದು ಹೋಗಿದ್ದನು. ಕಾಜಾರಗುತ್ತು ಎಂಬಲ್ಲಿ ರುವ ಕಲ್ಲಿನ ಕೋರೆಯಲ್ಲಿ ಒಣಗಲು ಹಾಕಿದ್ದ ನೀಲಿ ಬಣ್ಣದ ಟೀಶರ್ಟ್ ಧರಿಸಿಕೊಂಡು ಹೋಗಿದ್ದನು.
ಆರೋಪಿಯ ಶೋಧ ಕಾರ್ಯ ನಡೆಸುತ್ತಿದ್ದ ಪೊಲೀಸರಿಗೆ ಸ್ಥಳೀಯರಾದ ಕೃಷ್ಣ ಪ್ರಸಾದ್ ಶೆಟ್ಟಿ, ಯತೀಶ್ ಶೆಟ್ಟಿ, ಶೈಲೇಶ್ ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿ ದ್ದರು. ಕಾಲು ನೋವಿನಿಂದ ಬಳಲುತ್ತಿದ್ದ ಹನುಮಂತ ಹೆಚ್ಚು ದೂರ ಹೋಗಲು ಸಾಧ್ಯ ಇಲ್ಲ ಎಂಬುದನ್ನು ಅರಿತ ಪೊಲೀಸರು ಅದೇ ಪರಿಸರದಲ್ಲಿ ಹುಡುಕಾಟ ಮುಂದುವರೆಸಿದರು.
ಆರೋಪಿಯ ಹುಡುಕಾಟಕ್ಕಾಗಿ ಎಸ್ಪಿ ನಿಶಾ ಜೇಮ್ಸ್ ಹಾಗೂ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಪೊಲೀಸ್ ತಂಡವನ್ನು ರಚಿಸಿದರು. ಈ ಕಾರ್ಯಾಚರಣೆ ಯಲ್ಲಿ ಇಡೀ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಎಸ್ಸೈ ಹಾಗೂ ಸಿಬ್ಬಂದಿ ಗಳು ಕೈಜೋಡಿಸಿದ್ದರು. ಪೊಲೀಸರು ರಾತ್ರಿ ನಿದ್ದೆ ಬಿಟ್ಟು ಹಗಲಿರುಳು ಹನು ಮಂತನಿಗಾಗಿ ಹುಡುಕಾಟ ನಡೆಸಿದರು.
ಸ್ಥಳೀಯರಿಂದ ಮಾಹಿತಿ: ಅಲ್ಲಿಂದ ಪೆರ್ಣಂಕಿಲ ಕಡೆ ತೆರಳಿದ ಹನುಮಂತ, ಇಂದು ಬೆಳಗ್ಗೆ ಮನೆಯೊಂದರಲ್ಲಿ ನೀರು ಕೇಳಿ ಕುಡಿದಿದ್ದನು. ಈ ಬಗ್ಗೆ ಪೆರ್ಣಂಕಿಲ ಸಮೀಪದ ವರ್ವಾಡಿಯ ಕೃಷ್ಣ ಕುಲಾಲ್ ಎಂಬವರ ಪತ್ನಿ ಶ್ರೀಲತಾ ಕುಲಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಅಲರ್ಟ್ ಆದ ಪೊಲೀಸರು ಪೆರ್ಣಂಕಿಲ ಪರಿಸರದಲ್ಲಿ ಸ್ಥಳೀಯರ ಸಹಕಾರ ದೊಂದಿಗೆ ಹನುಮಂತನಿಗಾಗಿ ತೀವ್ರ ಶೋಧ ಕಾರ್ಯ ನಡೆಸಿದರು.
ಸಂಜೆ ವೇಳೆ ಪೆರ್ಣಂಕಿಲ ಲಾಂಜೋಳಿ ನಿವಾಸಿ ಪುಷ್ಪಲತಾ ನೀಡಿದ ಮಾಹಿತಿಯಂತೆ ಪೊಲೀಸರು ಸಾರ್ವಜನಿಕರ ಸಹಕಾರದೊಂದಿಗೆ ಲಾಂಜೋಳಿ ಬಸ್ ನಿಲ್ದಾಣ ಸಮೀಪದ ಹಾಡಿಯಲ್ಲಿ ಆರೋಪಿ ಹನುಮಂತನನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ ಪೊಲೀಸ್ ತಂಡ, ಮಾಹಿತಿ ನೀಡಿದ ಸ್ಥಳೀಯರು ಹಾಗೂ ಸಹಕಾರ ನೀಡಿದ ಸಾರ್ವಜನಿಕರ ಕಾರ್ಯಕ್ಕೆ ಎಸ್ಪಿ ನಿಶಾ ಜೇಮ್ಸ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನಾಲ್ವರು ಪೊಲೀಸರ ಅಮಾನತು: ಎಸ್ಪಿ
ಅತ್ಯಾಚಾರ ಕೊಲೆ ಆರೋಪಿ ಹನುಮಂತ ತಪ್ಪಿಸಿಕೊಂಡು ಪರಾರಿಯಾಗಿ ರುವ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಮಣಿಪಾಲ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗಳನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಶಾ ಜೇಮ್ಸ್ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಹನುಮಂತನನ್ನು ಪೊಲೀಸ್ ವಾಹನದಲ್ಲಿ ಜೈಲಿಗೆ ಕರೆದುಕೊಂಡು ಹೋಗು ತ್ತಿದ್ದ ಮಣಿಪಾಲ ಠಾಣೆಯ ಹೆಡ್ಕಾನ್ಸ್ಟೇಬಲ್ ಉಮೇಶ್, ಸಿಬ್ಬಂದಿಗಳಾದ ರೆಹಮತುಲ್ಲಾ, ಚನ್ನೇಶ್ ಮತ್ತು ಚಾಲಕ ಡಿಎಆರ್ ಸಿಬ್ಬಂದಿ ಸುರೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಎಸ್ಪಿ ನಿಶಾ ಜೇಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.