ಸುಳ್ಯ ಟಿಎಪಿಸಿಎಂಎಸ್ ಚುನಾವಣೆ: ರಾಜೇಂದ್ರಕುಮಾರ್ ಸಹಕಾರಿ ಬಳಗ ಜಯಭೇರಿ
ಮಂಗಳೂರು, ಎ.1: ಸುಳ್ಯ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಸುಳ್ಯ ಟಿಎಪಿಸಿಎಂಎಸ್ ಸಂಸ್ಥೆಗೆ ರವಿವಾರ ಚುನಾವಣೆ ನಡೆದಿದ್ದು, ರಾಜೇಂದ್ರ ಕುಮಾರ್ ಸಹಕಾರಿ ಬಳಗ ಜಯಭೇರಿ ಬಾರಿಸಿದೆ.
ಸುಳ್ಯ ಟಿಎಪಿಸಿಎಂಎಸ್ ಸಂಸ್ಥೆಗೆ 13 ಮಂದಿ ನಿರ್ದೇಶಕರ ಆಯ್ಕೆಯಾಗಬೇಕಾಗಿದ್ದು, ಇದರಲ್ಲಿ ರಾಜೇಂದ್ರ ಕುಮಾರ್ ಸಹಕಾರಿ ಬಳಗದ 8 ಮಂದಿ ನಿರ್ದೇಶಕರು ಆಯ್ಕೆಗೊಂಡಿದ್ದಾರೆ.
ಎಂ.ಬಿ. ನಿತ್ಯಾನಂದ, ಜಯರಾಮ ಪಿ.ಸಿ., ಸೋಮಶೇಖರ ಕೊಂಗಾಜೆ, ಬೆಟ್ಟ ಉದಯಕುಮಾರ್, ಸತೀಶ್ ಕೂಜುಗೋಡು, ವಿನೋದ ಮಲ್ಲಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗಂಗಾಧರ ಪಿ.ಎಸ್. ಹಾಗೂ ಬೀರಾಮೊಯಿದ್ದೀನ್ ಕೆ. ಚುನಾವಣೆಯಲ್ಲಿ ಆಯ್ಕೆಗೊಂಡಿರುತ್ತಾರೆ. ಬಿಜೆಪಿ ಬೆಂಬಲಿತರ ಪೈಕಿ ನಿರ್ದೇಶಕ ಮಂಡಳಿಗೆ 5 ಮಂದಿ ಆಯ್ಕೆಗೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story