ಕೋಡಿ: ಬ್ಯಾರೀಸ್ ನಲ್ಲಿ ವಿಪತ್ತು ನಿರ್ವಹಣಾ, ಪೂರ್ವ ಸಿದ್ಧತಾ ಕಾರ್ಯಕ್ರಮ
ಕೋಡಿ: ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು, ಕೋಡಿ ಕುಂದಾಪುರ, ಇದರ ಯುವ ರೆಡ್ಕ್ರಾಸ್ ಘಟಕ ಮತ್ತು ಭಾರತೀಯ ರೆಡ್ಕ್ರಾಸ್ ಘಟಕ ಕುಂದಾಪುರ ತಾಲೂಕು ಇವರ ಸಹಯೋಗದೊಂದಿಗೆ ವಿಪತ್ತು ನಿರ್ವಹಣಾ ಹಾಗೂ ಪೂರ್ವ ಸಿದ್ಧತಾ ಕುರಿತು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ವಿಪತ್ತು ನಿರ್ವಹಣಾ ತರಬೇತುದಾರ ಡಾ. ಸುರೇಶ್ ಶೆಣೈ, ಇವರು ವಿಪತ್ತು ನಿರ್ವಹಣೆಯ ಅವಶ್ಯ ಅಂಶಗಳಾದ ಮುನ್ಸೂಚನೆ, ವಿಪತ್ತಿಗೆ ಈಡಾಗುವಿಕೆ, ಮರುಮಾರ್ಪಾಟು, ಪಾರುಮಾಡುವಿಕೆ, ಪರಿಹಾರ, ಪುನರ್ವಸತಿ, ತುರ್ತು ಚಿಕಿತ್ಸೆ,ಆರೋಗ್ಯ ರಕ್ಷಣೆ ಮುಂತಾದ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಜಯಕರ್ ಶೆಟ್ಟಿ ಅಧ್ಯಕ್ಷರು, ಭಾರತೀಯ ರೆಡ್ಕ್ರಾಸ್ ಘಟಕ ಕುಂದಾಪುರ ಘಟಕ ಮತ್ತು ಕಾಲೇಜಿನ ಯುವ ರೆಡ್ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ವಿದ್ಯಾಧರ್ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮಾಧಿಕಾರಿ ಸ್ವಾಗತಿಸಿ, ವಿದ್ಯಾರ್ಥಿ ನೌಫಾಲ್ ವಂದಿಸಿದರು. ವಿದ್ಯಾರ್ಥಿನಿ ದಿಲ್ಶಾದ್ ಕಾರ್ಯಕ್ರಮ ನಿರೂಪಿಸಿದರು.