ಡಾ.ವಹೀದಾ ಭಾನುರಿಗೆ ಪಿಎಚ್ಡಿ
ಉಡುಪಿ, ಎ. 2: ಮೂಡುಬಿದಿರೆಯ ಆಳ್ವಾಸ್ ಆರ್ಯುರ್ವೇದ ಕಾಲೇಜ್ನ ಪ್ರೊಫೆಸರ್ ಆಗಿರುವ ಡಾ. ವಹೀದಾ ಭಾನು ಅವರು ಮಂಡಿಸಿದ ‘ಎ ಕಾಂಪರೇಟಿವ್ ಕ್ಲಿನೀಕಲ್ ಸ್ಟಡಿ ಆನ್ ದ ಇಫೆಕ್ಟ್ ಆಫ್ ಯರಂಡಾ ತೈಲ, ವಲುಕಾ ಸ್ವೇದಾ ಮತ್ತು ರಸೋನಪಿಂಡ ಇನ್ ದ ಟ್ರೀಟ್ಮೆಂಟ್ ಆಫ್ ಆಮಾವಾತ’ ವಿಚಾರವಾಗಿ ಮಂಡಿಸಿದ ಪ್ರಬಂಧಕ್ಕೆ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಪಿಎಚ್ಡಿ ಪದವಿ ನೀಡಿದೆ.
ಇವರು ಉಡುಪಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಅರ್ಯುರ್ವೇದ ಕಾಲೇಜ್ನ ಪ್ರಾಚಾರ್ಯರಾದ ಪ್ರೊ. ಡಾ.ಜಿ. ಶ್ರೀನಿವಾಸ ಆಚಾರ್ಯರವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.
ಡಾ.ವಹೀದಾ ಭಾನು ಸುರತ್ಕಲ್ನ ನ್ಯಾಯವಾದಿ ಹಾಗೂ ನೋಟರಿ ಮುಹಮ್ಮದ್ ಇಸ್ಮಾಯಿಲ್ರ ಪತ್ನಿ.
Next Story