ಉದ್ಯಾವರ ಎಂಇಟಿ ಶಾಲಾ ಮಕ್ಕಳ ಘಟಿಕೋತ್ಸವ
ಉಡುಪಿ, ಎ.2: ಉದ್ಯಾವರ ಕೊರಂಗ್ರಪಾಡಿ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ಘಟಿಕೋತ್ಸವ ಮತ್ತು ಅಕಾಡೆಮಿ ಅವಾರ್ಡ್-2019 ಪ್ರದಾನ ಸಮಾರಂಭವು ಮಾ.30ರಂದು ಉದ್ಯಾವರ ಹಫ್ಸಾ ಆಡಿಟೋರಿಯಂ ನಲ್ಲಿ ಜರಗಿತು.
ಉಡುಪಿಯ ದಂತ ವೈದ್ಯೆ ಡಾ.ಅನುರಾಧ ಸೂಡಾ ಮಾತನಾಡಿ, ಪ್ರಾಥಮಿಕ ತರಗತಿಗಳು ಶಿಕ್ಷಣದ ಪಿರಮಿಡ್ನಲ್ಲಿ ಪ್ರಮುಖ ಹಂತವಾಗಿದೆ. ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ಶಾಲೆಯ ಪರಿಸರವು ಅತ್ಯಂತ ಮಹತ್ವದ್ದಾಗಿದೆ. ಎಂಇಟಿ ಶಾಲೆಯು ಮಗುವಿನ ಉತ್ತಮ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಿಲ್ಲಾತ್ ಎಜ್ಯುಕೇಶನ್ ಟ್ರಸ್ಟ್ನ ಉಪಾಧ್ಯಕ್ಷ ಶಭೀ ಅಹ್ಮದ್ ಕಾಝಿ ಮಾತನಾಡಿ, ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಮುಂದಿನ ವರ್ಷಗಳಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸು ಉದ್ದೇಶ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಕಾಡೆಮಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಗೋವಾದ ಉದ್ಯಮಿ ಮುಸ್ತಕ್ ಅಹ್ಮದ್, ಉಡುಪಿ ಒಕ್ಟೋಪಸ್ ಇವೆಂಟ್ಸ್ನ ಯಾಸೀನ್ ಮಲ್ಪೆ, ಉದ್ಯಮಿ ಮುಹಮ್ಮ್ ವೌಲಾ ಮುಖ್ಯ ಅತಿಥಿಗಳಾಗಿದ್ದರು.
ಎಂಇಟಿ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಕೋಶಾಧಿಕಾರಿ ಇಕ್ಬಾಲ್ ಶಂಶುದ್ದೀನ್ ಕಟಪಾಡಿ, ಟ್ರಸ್ಟಿಗಳಾದ ಹಾಜಿ ಕೆ.ಅಬ್ದುಲ್ಲ ಪರ್ಕಳ, ಶಾಹನ ವಾಜ್ ಕುಕ್ಕಿಕಟ್ಟೆ, ಮುಹಮ್ಮದ್ ಫಯಾಜ್, ಅಕಾಡೆಮಿ ಮುಖ್ಯಸ್ಥೆ ಡಾ. ಜುನೈದಾ ಸುಲ್ತಾನಾ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಅಬೂಬಕ್ಕರ್ ಐ.ಯು. ಶಾಲಾ ವರದಿ ವಾಚಿಸಿದರು. ಸಂಧ್ಯಾ ಸ್ವಾಗತಿಸಿದರು. ರುಬಿನ ಜಾಕ್ಲಿನ್ ಪಂಗ್ಲಾನ್ನ ವಂದಿಸಿ ದರು. ಸಬೀನಾ ಕಾರ್ಯಕ್ರಮ ನಿರೂಪಿಸಿದರು.