ಜಿಲ್ಲಾ ಕಾಂಗ್ರೆಸ್ ರಾ.ಕರಕುಶಲ ಮಂಡಳಿಯ ವಾರ್ಷಿಕ ಪ್ರಶಸ್ತಿ ವಿತರಣೆ
ಮಣಿಪಾಲ, ಎ.2: ದೇಶದ ಕರಕುಶಲ ಕರ್ಮಿಗಳ ಸನ್ಮಾನವೆಂದರೆ ಅದು ನಮ್ಮ ಪರಂಪರೆ, ಸಂಸ್ಕತಿಯನ್ನು ಸಮ್ಮಾನಿಸಿದಂತೆ ಎಂದು ಹಿರಿಯ ಪತ್ರಕರ್ತೆ ಡಾ. ಸಂಪ್ಯಾ ಎಸ್. ಪೈ ಅಭಿಪ್ರಾಯ ಪಟ್ಟಿದ್ದಾರೆ.
ಮಣಿಪಾಲದ ಹೆರಿಟೇಜ್ ವಿಲೇಜ್ ಆವರಣದಲ್ಲಿರುವ ವಿಜಯನಾಥ ಶೆಣೈ ಸ್ಮಾರಕ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಚೆನ್ನೈನ ಭಾರತೀಯ ಕರಕುಶಲ ಮಂಡಳಿ (ಸಿಸಿಐ) ವಾರ್ಷಿಕ ಅಧಿವೇಶನದ ಸಮಾರೋಪ ಸಮಾರಂದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವು ಮಾತನಾಡುತಿದ್ದರು.
ದೇಶದಲ್ಲಿ ಅಪಾರ ಸಂಖ್ಯೆಯಲ್ಲಿರುವ ಕರಕುಶಲ ವೃತ್ತಿಪರರನ್ನು ಗುರುತಿಸದೆ ಹೋದರೆ ಮತ್ತು ಮುಂದಿನ ಪೀಳಿಗೆಗೆ ಇದನ್ನು ಹಸ್ತಾಂತರಿಸದೇ ಹೋದರೆ ಭವಿಷ್ಯದಲ್ಲಿ ಇಂದು ನಮ್ಮಿಂದ ಕಣ್ಮರೆಯಾಗಬಹುದು ಎಂದವರು ಕಳವಳ ವ್ಯಕ್ತಪಡಿಸಿದರು.
ನಾವು ರ್ಯಾಂಕ್ ಸಂಪಾದಿಸಿದವರನ್ನು ಗೌರವಿಸುತ್ತೇವೆ. ನಮ್ಮೀ ದೇಶದ ಕರಕುಶಲಕರ್ಮಿಗಳು ನೈಸರ್ಗಿಕ ಬುದ್ಧಿವಂತರು. ಅವರು ಸಹಜವಾದ ನಿಸರ್ಗದತ್ತ ಭಾವನೆಗಳನ್ನು ಸ್ಮರಣೀಯಗೊಳಿಸುವಂತೆ ಕಲಾಕೃತಿಗಳನ್ನು ಸೃಷ್ಟಿಸುತ್ತಾರೆ. ನಾವೀಗ ಹಣ, ಐಷಾರಾಮಿತನ, ಅಂತಸ್ತು, ಅಧಿಕಾರಗಳ ಹಿಂದೆ ಹೋಗುತ್ತಿರುವುದರಿಂದ ಕರಕುಶಲಕಲೆಗಳನ್ನು ಯುವ ಪೀಳಿಗೆಗೆ ಹಸ್ತಾಂತರಿಸದೆ ಹೋರೆ ಈ ಕಲೆ ಉಳಿಯುವುದಿಲ್ಲ ಎಂದರು.
ಅಧ್ಯಕ್ಷತೆಯನ್ನು ಸಿಸಿಐ ಅಧ್ಯಕ್ಷೆ ಗೀತಾರಾಮ್ ವಹಿಸಿದ್ದರು. ವಿವಿಧ ಸಾಧಕ ಕರಕುಶಲಕರ್ಮಿಗಳಾದ ಮಧ್ಯಪ್ರದೇಶದ ಹಾಜಿ ಇಬ್ರಾಹಿಂ ಕತ್ರಿ, ಅಹಮದಾಬಾದ್ನ ಕಾರ್ತಿಕ್ ಚೌಹಾಣ್, ರಾಜಸ್ಥಾನ ಜೈಪುರದ ಮೋಹಿತ್ ಜಾಂಗೇಡ್, ತಮಿಳುನಾಡು ಕಾರೈಕುಡಿಯ ಎಸ್.ಪಿ.ಮುಖಯ್ಯ, ಪಶ್ಚಿಮ ಬಂಗಾಳ ನಾಡಿಯಾದ ಬರೇನ್ಕುಮಾರ್ ಬಸಿಕ್, ಒಡಿಸ್ಸಾ ಪುರಿಯ ಪ್ರಶಾಂತ್ ಮಹಾರಾಣ ಅವರನ್ನು ತಲಾ 10,000 ರೂ., ಶಾಲು, ಹಾರವನ್ನು ಒಳಗೊಂಡ ವಾರ್ಷಿಕ ಪ್ರಶಸ್ತಿಗಳೊಂದಿಗೆ ಪುರಸ್ಕರಿಸಲಾಯಿತು.
ಸಿಸಿಐ ಮಾಜಿ ಅಧ್ಯಕ್ಷೆ ಉಷಾ ಕೃಷ್ಣ ಸ್ವಾಗತಿಸಿ ಸುಧಾ ರವಿ ವಂದಿಸಿದರು.