ಎ. 3: ಮತದಾನ ಜಾಗೃತಿ ಅಭಿಯಾನ
ಮಂಗಳೂರು, ಎ.2: ನಗರದ ಮೇರಿಹಿಲ್ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯ ಸಭಾಂಗಣದಲ್ಲಿ ಎ.3ರಂದು ಬೆಳಗ್ಗೆ 8:30ಕ್ಕೆ ಮತದಾನದ ಜಾಗೃತಿ ಅಭಿಯಾನ ನಡೆಯಲಿದೆ.
ಜಿಲ್ಲಾ ಗೃಹರಕ್ಷಕ ದಳ, ಲಯನ್ಸ್ ಕ್ಲಬ್, ತುಳುನಾಡು, ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಮುಖ್ಯ ಅತಿಥಿಗಳಾಗಿ ತುಳುನಾಡು ಲಯನ್ಸ್ ಕ್ಲಬ್ನ ಅಧ್ಯಕ್ಷ ವಿಲ್ಸನ್ ದಿವಾಕರ್, ನ್ಯಾಯವಾದಿ ಕೆ.ಎಸ್.ಎನ್.ರಾಜೇಶ್ ಭಾಗವಹಿಸಲಿದ್ದಾರೆ.
ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ.ಮುರಲಿ ಮೋಹನ್ ಚೂಂತಾರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story