ಅಧಿಕಾರಯುತ ಮತ ಚಲಾಯಿಸಿ: ರಾಜೇಶ್
ಮಂಗಳೂರು, ಎ.3: ಮತದಾನ ಎನ್ನುವುದು ಬಹಳ ಪವಿತ್ರವಾದ ಪ್ರಕ್ರಿಯೆ. ಮತದಾನವನ್ನು ಯೋಗ್ಯ ವ್ಯಕ್ತಿಗೆ ಅಧಿಕಾರಯುತವಾಗಿ ಚಲಾಯಿಸಿ ಎಂದು ಲೋಕಾಯುಕ್ತ ಮತ್ತು ಎಸಿಬಿಯ ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ಸಲಹೆ ನೀಡಿದ್ದಾರೆ.
ಜಿಲ್ಲಾ ಗೃಹರಕ್ಷಕದಳದ ಕಚೇರಿಯಲ್ಲಿ ಜಿಲ್ಲಾ ಗೃಹರಕ್ಷಕ ದಳ ಮತ್ತು ಲಯನ್ಸ್ ಕ್ಲಬ್ ತುಳುನಾಡು ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಮತದಾನ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ದಿವಾಕರ್ ವಿಲ್ಸನ್ ಮಾತನಾಡಿ, ಗೃಹರಕ್ಷಕರು ಇತರರಿಗೆ ಮಾದರಿಯಾಗಿದ್ದಾರೆ. ಸುರಕ್ಷಿತ ಮತ್ತು ನ್ಯಾಯೋಚಿತ ಮತದಾನ ಮಾಡಲು ಗೃಹರಕ್ಷಕರು ಅನಿವಾರ್ಯ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಡಾ.ಮುರಲೀ ಮೋಹನ ಚೂಂತಾರು ವಹಿಸಿದ್ದರು. ಈ ಸಂದರ್ಭ ಹಿರಿಯ ಗೃಹರಕ್ಷಕ ರಮೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಶುಭ ಕುಲಾಲ್ ವಂದಿಸಿದರು.
Next Story