ಪಾಣೆಮಂಗಳೂರು ವಲಯ ಸಮಿತಿ ಅಧ್ಯಕ್ಷರಾಗಿ ಇಕ್ಬಾಲ್ ಆಯ್ಕೆ
ಬಂಟ್ವಾಳ, ಮಾ. 3: ಪಾಣೆಮಂಗಳೂರು ವಲಯ ಸಮಿತಿ ಅಧ್ಯಕ್ಷರಾಗಿ ಇಕ್ಬಾಲ್ ಜೆ.ಟಿ.ಟಿ.ಅಕ್ಕರಂಗಡಿ ಅವರು ಅಯ್ಕೆಯಾಗಿದ್ದಾರೆ.
ಶನಿವಾರ ಮೆಲ್ಕಾರ್ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ಸುದೀಪ್ ಶೆಟ್ಟಿ ಅವರ ನೇತೃತ್ವದಲ್ಲಿ ಈ ಆಯ್ಕೆ ನಡೆದಿದೆ. ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ, ಚಿತ್ತರಂಜನ್ ಶೆಟ್ಟಿ, ಜೆಸಿಂತಾ ಡಿಸೋಜ, ಗಾಯತ್ರಿಪ್ರಕಾಶ್ ಮಹೇಶ್ ನಾಯಕ್ ಇರ್ಶಾದ್ ಗುಡ್ಡೆಯಂಗಡಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Next Story