ಉಡುಪಿ: ಕನಕದಾಸ ಕೀರ್ತನ, ಸಂಗೀತ ರಸಗ್ರಹಣ ಶಿಬಿರ
ಉಡುಪಿ, ಎ.3: ಉಡುಪಿಯ ಕನಕದಾಸ ಅಧ್ಯಯನ ಸಂಶೋಧನ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಹಾಗೂ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಕನಕದಾಸ ಕೀರ್ತನ ಮತ್ತು ಸಂಗೀತ ರಸಗ್ರಹಣ ಶಿಬಿರವನ್ನು ಎ.13 ಮತ್ತು 14ರಂದು ಎಂಜಿಎಂ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಎರಡೂ ದಿನಗಳಂದು ಬೆಳಗ್ಗೆ 9:00ರಿಂದ ಸಂಜೆ 5:00ರವರೆಗೆ ನಡೆಯಲಿ ರುವ ಈ ಶಿಬಿರವನ್ನು ಚೆನ್ನೈನ ಡಾ.ಮುಲ್ಲೈ ವಾಸಲ್ ಚಂದ್ರಮೌಳಿ ನಡೆಸಿ ಕೊಡಲಿದ್ದಾರೆ. ಎ.13ರ ಸಂಜೆ 4:00 ಗಂಟೆಗೆ ಬರೋಡದ ಯಸ್.ಕೆ. ಮಹ್ತ ಇವರ ಸಂಗೀತ ಕಚೇರಿ ನಡೆಯಲಿದೆ. ಮಂಗಳೂರಿನ ವೇಣುಗೋಪಾಲ್ ಶ್ಯಾನುಬೋಗ್ ವಯಲಿನ್ನಲ್ಲಿ ಹಾಗೂ ಮಣಿಪಾಲದ ಡಾ. ಬಾಲಚಂದ್ರ ಆಚಾರ್ ಮೃದಂಗದಲ್ಲಿ ಸಹಕರಿಸಲಿದ್ದಾರೆ.
ಎ.14ರಂದು ಬೆಳಗ್ಗೆ 9:00ರಿಂದ ಸಂಗೀತ ಶಿಬಿರ, ಅಪರಾಹ್ನ 1:45ರಿಂದ 3:15ರವರೆಗೆ ಪುತ್ತೂರಿನ ಶ್ರೀಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾವಿದರಿಂದ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ನಿರ್ದೇಶನದಲ್ಲಿ ‘ಹರಿತ’ ಎಂಬ ವಿಷಯಾಧಾರಿತ, ಕನಕದಾಸರ ಹಾಡುಗಳಿಗೆ ಸಂಬಂಧಪಟ್ಟಂತೆ ಭರತನಾಟ್ಯ ಪ್ರಸ್ತುತಿ ನಡೆಯಲಿದೆ.
ಈ ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವ ವಿದ್ಯಾರ್ಥಿಗಳು/ಆಸಕ್ತರು ಸರಿಗಮ ಭಾರತಿಯಉಮಾಶಂಕರಿ(ದೂರವಾಣಿ:9481355606/9964140601) ಇವರಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ಕೇಂದ್ರದ ಸಂಯೋಜಕರಾದ ಪ್ರೊ. ವರದೇಶ ಹಿರೇಗಂೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.