ಆರ್ಐಸಿಟಿ ತಂತ್ರಾಂಶ ಅಳವಡಿಕೆ: ಅಂಚೆಕಚೇರಿಯ ವ್ಯವಹಾರ ಸ್ಥಗಿತ
ಉಡುಪಿ, ಎ.3: ಉಡುಪಿ ವಿಭಾಗದ ಎಲ್ಲಾ ಶಾಖಾ ಅಂಚೆ ಕಚೇರಿಗಳು ಎ.9ರಂದು ಆರ್ಐಸಿಟಿ ತಂತ್ರಾಂಶಕ್ಕೆ ಅಳವಡಿಕೆ ಆಗಲಿರುವುದರಿಂದ ಎ.5, 6 ಮತ್ತು 8ರಂದು ಶಾಖಾ ಅಂಚೆಕಚೇರಿಗಳಲ್ಲಿ ಯಾವುದೇ ರೀತಿಯ ವ್ಯವಹಾರಗಳು ನಡೆಯುವುದಿಲ್ಲ ( ಎ.7 ರವಿವಾರ ರಜೆ). ಆದ್ದರಿಂದ ಅಂಚೆ ಇಲಾಖೆಯ ಗ್ರಾಹಕರು/ಸಾರ್ವಜನಿಕರು ಅಂಚೆ ಇಲಾಖೆಯೊಂದಿಗೆ ಸಹಕರಿ ಸುವಂತೆ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.
Next Story