ಮಳೆಗಾಲಕ್ಕೂ ಮುನ್ನ ಬೃಹತ್ ಚರಂಡಿ ಹೂಳೆತ್ತಿ: ಡಿಸಿ
ಮಂಗಳೂರು, ಎ.4: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಚರಂಡಿಗಳ ಹೂಳೆತ್ತುವ ಕಾರ್ಯವನ್ನು ಮಳೆಗಾಲ ಆರಂಭಕ್ಕೆ ಮುಂಚೆ ಕೈಗೊಳ್ಳಲು ಜಿಲ್ಲಾಧಿಕಾರಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದರು.
ಕೊಟ್ಟಾರಚೌಕಿ ಹಾಗೂ ಕೂಳೂರು ಪ್ರದೇಶದ ಬೃಹತ್ ಚರಂಡಿಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿ ಹೂಳೆತ್ತಲು ಹಾಗೂ ಅಡೆತಡೆ ನಿವಾರಿಸಲು ಸೂಕ್ತ ನಿರ್ದೇಶನ ನೀಡಿದರು. ಚರಂಡಿ ಹರಿವಿಗೆ ಅಡೆತಡೆಗಳನ್ನೊಡ್ಡಿರುವ ಕಾರಣಕರ್ತರನ್ನು ಕರೆಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಿ ಎಂದು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
Next Story