ಎ. 9: ಮೂಡುಬಿದಿರೆಯ ಆಳ್ವಾಸ್ ನಲ್ಲಿ ದಿ ಹಿಂದೂ-ರೋಸ್ಟ್ರಮ್ ಅಂತರ ರಾಜ್ಯ ಕಾಲೇಜು ಮಟ್ಟದ ಚರ್ಚಾ ಸ್ಪರ್ಧೆ
ಮಂಗಳೂರು, ಎ. 4: ಆಳ್ವಾಸ್ ಶಿಕ್ಷಣ ಸಂಸ್ಥೆಯ ರೋಸ್ಟರಮ್ ಸ್ಪೀಕರ್ ಕ್ಲಬ್ ಸಹಯೋಗದೊಂದಿಗೆ ದಿ ಹಿಂದೂ ಪತ್ರಿಕೆಯ ವತಿಯಿಂದ ಎ. 9ರಂದು ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್ ಪದವಿ ಕಾಲೇಜು ಆವರಣದಲ್ಲಿ ದಿ ಹಿಂದೂ-ರೋಸ್ಟ್ರಮ್ ಅಂತರ ರಾಜ್ಯ ಕಾಲೇಜು ಮಟ್ಟದ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಪದವಿ ತತ್ಸಮಾನ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.
ಈ ಚರ್ಚಾ ಸ್ಪರ್ಧೆಗೆ ಉಚಿತ ಪ್ರವೇಶವಿದ್ದು ವಿಜೇತರಿಗೆ ನಗದು ಹಾಗೂ ಆಕರ್ಷಕ ಬಹುಮಾನವಿದೆ. ಸ್ಪರ್ಧೆ ಆಂಗ್ಲ ಭಾಷೆಯಲ್ಲಿ ನಡೆಯುತ್ತದೆ. ಉಡುಪಿ ಮಂಗಳೂರಿನಿಂದ ಬರುವ ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ ಇರುತ್ತದೆ. ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಹಾಗೂ ಪರ ಊರಿನಿಂದ ಬರುವ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆಯನ್ನು ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸುರೇಂದ್ರ ಶೆಟ್ಟಿ- 9448279124, ಮಾಧವ- 9035566695, ಎಂ.ಜೆ ಮ್ಯಾಥ್ಯೂ -9980771213 ಇವರನ್ನು ಸಂಪರ್ಕಿಸಬಹುದು.
ವಿದ್ಯಾರ್ಥಿಗಳು ಹೆಸರು ನೊಂದಾಯಿಸಲು Email; mlrcir@ thehindu.co.in or Online registration at www.aiet. org.in/debate-thehindu.html ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.