ಎ. 8ರಿಂದ ನಿಟ್ಟೆ ವಿವಿಯಿಂದ 3ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
ಮಂಗಳೂರು, ಎ.5: ನಿಟ್ಟೆ ವಿವಿ ವತಿಯಿಂದ ಪ್ರತಿ ವರ್ಷ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮೂರನೇ ಅವತರಣಿಕೆಯು ಎ.8ರಿಂದ 11ರವರೆಗೆ ಭಾರತ್ ಮಾಲ್ನ ಭಾರತ್ ಸಿನಿಮಾಸ್ನಲ್ಲಿ ನಡೆಯಲಿದೆ.
ಎಲ್ಲ ಚಿತ್ರಗಳು ಸಾರ್ವಜನಿಕರಿಗೆ ಉಚಿತ ವೀಕ್ಷಣೆಗೆ ಲಭ್ಯವಿರುತ್ತವೆ ಹಾಗೂ ಚಿತ್ರೋತ್ಸವದಲ್ಲಿ ನಡೆಯುವ ಚರ್ಚೆಗಳಲ್ಲಿ ಕೂಡಾ ಮುಕ್ತವಾಗಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶವಿದೆ. ಮೊದಲು ಬಂದವರಿಗೆ ಮೊದಲು ಆದ್ಯತೆ ನೀಡಲಾಗುವುದು. ಎ.8ರಂದು ಬೆಳಗ್ಗೆ 9:30ಕ್ಕೆ ನಿರ್ದೇಶಕ ಪಿ.ಶೇಷಾದ್ರಿ ಚಿತ್ರೋತ್ಸವ ಉದ್ಘಾಟಿಸುವರು.
ಈ ವೇಳೆ ‘ಮೂಕಜ್ಜಿಯ ಕನಸುಗಳು’ ಚಿತ್ರಪ್ರದರ್ಶನ ನಡೆಯಲಿದೆ. ಚಿತ್ರೋತ್ಸವದಲ್ಲಿ ಈ ವರ್ಷ ಪಾಲ್ಗೊಳ್ಳುವ ಪ್ರಮುಖ ಚಿತ್ರಗಳೆಂದರೆ ಈ ಮಾ ಯು (ಮಲೆಯಾಳಂ), ಕಾಲ (ತುಳು), ಪಡ್ಡಾಯಿ (ತುಳು), ಅಕ್ಟೋಬರ್ (ಹಿಂದಿ), ತುಂಬ್ಬದ್ (ಹಿಂದಿ), ರೇಡು (ಮರಾಠಿ), ದಿಥಿ (ಮರಾಠಿ), ಸರ್ಕಾರಿ ರಿಯ ಪ್ರಾಥಮಿಕ ಶಾಲೆ- ಕಾಸರಗೋಡು (ಕನ್ನಡ), ಅಭ್ಯಕ್ತೊ (ಬಂಗಾಳಿ). ಚಿತ್ರೋತ್ಸವದ ಸಮಾಪ್ತಿ ಚಿತ್ರವಾಗಿ ಕುಂಬಲಾಂಗಿ (ಮಲೆಯಾಳಂ) ಚಿತ್ರ ಪ್ರದರ್ಶನಗೊಳ್ಳಲಿದೆ.
ಮಂಗಳೂರಿನ ಕಲೆ ಮತ್ತು ಸಂಸ್ಕೃತಿ ಪರಿಸರದಲ್ಲಿ ಪ್ರಮುಖ ಚಿತ್ರೋತ್ಸವದ ಲೋಪವನ್ನು ಮನಗಂಡು ಎನ್ಐಎಫ್ಎಫ್ ಚಿತ್ರೋತ್ಸವವನ್ನು 2017ರಲ್ಲಿ ದ್ಯಾರ್ಥಿಗಳೇ ನಿರ್ವಸುವ ಚಲನಚಿತ್ರೋತ್ಸವವಾಗಿ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಆರಂಭಿಸಿದೆ. ಹಿಂದಿನ ಎರಡು ವರ್ಷಗಳ ಚಿತ್ರೋತ್ಸವದ ಯಶಸ್ಸಿನ ಆಧಾರದಲ್ಲಿ ಮೂರನೇ ಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದ್ದು, ಈ ಬಾರಿ ಹಿಂದಿ, ತುಳು, ಕನ್ನಡ, ಮಲೆಯಾಳಂ, ಉರ್ದು, ಬಂಗಾಲಿ, ಮರಾಠಿ, ತೆಲುಗು, ತುಳು, ಪೋರ್ಚುಗೀಸ್ ಮತ್ತು ಫ್ರೆಂಚ್ ಭಾಷೆಯ ಚಿತ್ರಗಳ ಸಹಿತ 70 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ಎಲ್ಲ ನಾಲ್ಕು ದಿನಗಳ ಅವಧಿಯಲ್ಲಿ ಭಾರತ್ ಸಿನಿಮಾಸ್ನ ಮೂರು ಪರದೆಗಳನ್ನು ಪ್ರತ್ಯೇಕವಾಗಿ ಚಿತ್ರೋತ್ಸವಕ್ಕೆ ಮೀಸಲಿಡಲಾಗಿದೆ.
ಅತಿಥಿಗಳಾಗಿ ರಿಷಭ್ ಶೆಟ್ಟಿ, ಸುಮಿತ್ರಾ ಭಾವೆ, ವೈದೇಹಿ, ವೀಣಾ ಬಕ್ಷಿ, ಅಭಯಸಿಂಹ, ಅಂಜಲಿ ಪಾಟೀಲ್, ಜಯಪ್ರಕಾಶ್ ರಾಧಾಕೃಷ್ಣನ್, ಸಂಚಾರಿ ವಿಜಯ್, ಅಜೀಜ್ ಖಾನ್ ಮತ್ತು ಪ್ರಿಯಾ ಕೃಷ್ಣಸ್ವಾಮಿ ಆಗಮಿಸುವರು.
ಚಿತ್ರ ವಿಮರ್ಶಕ ಮನು ಚಕ್ರವರ್ತಿ ಅವರು ಪಿ.ಶೇಷಾದ್ರಿಯ ಜತೆ ‘ಪಠ್ಯವಾಗಿ ಚಿತ್ರ: ಶಿವರಾಮ ಕಾರಂತರ ಬರಹಗಳನ್ನು ಸಿನಿಮಾ ಮೂಲಕ ಅರ್ಥ ಮಾಡಿಕೊಳ್ಳುವುದು’ ಎಂಬ ವಿಚಾರದ ಬಗ್ಗೆ ಎ. 8ರಂದು ಸಂಜೆ 5:15ಕ್ಕೆ ಸಂವಾದ ನಡೆಸಿಕೊಡುವರು. ಚಿತ್ರ ವಿಮರ್ಶಕರಾದ ಭಾರದ್ವಾಜ್ ರಂಗನ್, ಸೌಮ್ಯ ರಾಜೇಂದ್ರನ್ ಮತ್ತು ರೋಶನ್ ನಾಯರ್ ಅವರನ್ನೊಳಗೊಂಡ ಗುಂಪು ಚರ್ಚೆಯೂ ಇರುತ್ತದೆ ಎಂದು ಪ್ರಕಟನೆ ತಿಳಿಸಿದೆ.