ಎ.7ರಂದು ಉಚಿತ ಕಣ್ಣಿನ ತಪಾಸಣಾ ಶಿಬಿರ
ಉಡುಪಿ, ಎ.5: ಉಡುಪಿಯ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಮೆಳ್ಳೆಗಣ್ಣು/ಓರೆಗಣ್ಣು ತಪಸಾಣೆ ಮತ್ತು ಮಕ್ಕಳ ಕಣ್ಣಿನ ತಪಾಸಣಾ ಶಿಬಿರವನ್ನು ಎ.7ರಂದು ಆಯೋಜಿಸಲಾಗಿದೆ.
ಈ ಶಿಬಿರವನ್ನು ಖ್ಯಾತ ಮೆಳ್ಳೆಗಣ್ಣು ಮತ್ತು ಮಕ್ಕಳ ಕಣ್ಣಿನ ತಜ್ಞ ಡಾ.ಚಿನ್ನಪ್ಪ ಎ.ಜಿ. ನಡೆಸಿಕೊಡಲಿದ್ದಾರೆ. ಶಿಬಿರವು ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಶಿಬಿರದಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯತೆ ಕಂಡುಬಂದ ವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Next Story