ಬಂಟಕಲ್ಲಿಗೆ ತುರ್ತು ವಾಹನ: ನಾಗರಿಕ ಸೇವಾ ಸಮಿತಿ ರಚನೆ
ಶಿರ್ವ, ಎ.5: ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಬಂಟಕಲ್ಲು ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಕಸ್ಮಿಕ ದುರ್ಘಟನೆ, ರಸ್ತೆ ಅಪಘಾತ ಗಳು ನಡೆದಾಗ ತುರ್ತು ವಾಹನದ ಇಲ್ಲದೆ ಅನೇಕ ಪ್ರಾಣಹಾನಿ ಸಂಭವಿ ಸುತ್ತಿರುವ ಹಿನ್ನೆಲೆಯಲ್ಲಿ ಹೇರೂರು ಶ್ರೀಗುರುರಾಘವೇಂದ್ರ ಸಮಾಜ ಮಂದಿರ ದಲ್ಲಿ ಬುಧವಾರ ಕರೆಯಲಾದ ಸ್ಥಳೀಯ ವಿವಿಧ ಸಂಘಟನೆಗಳ ಸಭೆಯಲ್ಲಿ ಬಂಟಕಲ್ಲು ಕೇಂದ್ರವಾಗಿ ತುರ್ತುವಾಹನ(ಅಂಬುಲೆನ್ಸ್) ವ್ಯವಸ್ಥೆ ಮಾಡುವ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು.
ಸ್ಥಳೀಯ ಎಲ್ಲಾ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಬಂಟಕಲ್ಲು ನಾಗರಿಕ ಸೇವಾ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾ ಯಿತು. ನೂತನ ಅಧ್ಯಕ್ಷರಾಗಿ ಕೆ.ಆರ್.ಪಾಟ್ಕರ್, ಉಪಾಧ್ಯಕ್ಷರುಗಳಾಗಿ ಮಾಧವ ಕಾಮತ್, ಬಿ.ಪುಂಡಲೀಕ ಮರಾಠೆ, ಕಾರ್ಯದರ್ಶಿಯಾಗಿ ದಿನೇಶ ದೇವಾಡಿಗ ಹೇರೂರು, ಜತೆ ಕಾರ್ಯದರ್ಶಿಯಾಗಿ ರೋಹಿಣಿ ಜಗದೀಶ್ ನಾಯಕ್, ಕೋಶಾಧಿಕಾರಿಯಾಗಿ ಜಗದೀಶ ಆಚಾರ್ಯ ಹೇರೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿನ್ಸೆಂಟ್ ಕೆಸ್ತಲಿನೊ ಪಲ್ಕೆ, ಅನಂತರಾಮ ವಾಗ್ಲೆ ಸಡಂಬೈಲು, ಗಣೇಶ್ ಶೆಟ್ಟಿ ಹೇರೂರು, ಶೈಲೇಶ್ ಕಲ್ಲುಗುಡ್ಡೆ, ಡೇನಿಸ್ ಡಿಸೋಜ ಪಾಂಬೂರು, ರಾಘವೇಂದ್ರ ಕುಲಾಲ್, ದಿನೇಶ್ ಎಸ್.ಕೆ., ಹರೀಶ್ ಹೇರೂರು, ವಸಂತಿ ಅಶೋಕ್ ಆಚಾರ್ಯ ಹೇರೂರು, ಅರುಂಧತಿ ಪ್ರಭು, ಗೌರವ ಸಲಹೆಗಾರರಾಗಿ ಶಿಕ್ಷಕ ಎಸ್.ಎಸ್.ಪ್ರಸಾದ್, ಬಂಟಕಲ್ಲು ರಾಮಕೃಷ್ಣ ಶರ್ಮಾ, ಮುರಲೀಧರ್ ಆಚಾರ್ಯ, ಶಂಕರ ಪದಕಣ್ಣಾಯ, ಇಗ್ನೇಷಿಯಸ್ ಡಿಸೋಜ, ಶಂಕರ ಕೊಟ್ಯಾನ್, ವಿಠಲ್ ಕುಲಾಲ್ ಆಯ್ಕೆಯಾದರು.
ಹಲವು ದಶಕಗಳ ಹಿಂದೆ ಪ್ರತೀ ಸೋಮವಾರ ಬಂಟಕಲ್ಲಿನಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳ ಲಾಯಿತು. ಬಂಟಕಲ್ಲಿನ ಸರ್ವಾಂಗೀಣ ಪ್ರಗತಿ, ಸಾಮರಸ್ಯ ಹಾಗೂ ನಾಗರಿಕರ ಮೂಲಭೂತ ಸಮಸ್ಯೆಗಳ ಬಗ್ಗೆ ಸ್ಫಂದನ ನೀಡುವಲ್ಲಿ ನಾಗರಿಕ ಸೇವಾ ಸಮಿತಿಯ ಮೂಲಕ ವ್ಯವಹರಿಸು ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಬಂಟಕಲ್ಲು ಸಾರ್ವಜನಿಕ ಗಣೇಶೋತ್ಸವ ಸಮಿತಿ, ರಾಜಾಪುರ ಸಾರಸ್ವತ ಯುವ ವೃಂದ, ಶ್ರೀದುರ್ಗಾ ಮಹಿಳಾ ವೃಂದ, ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿ, ಗುರುರಾಘವೇಂದ್ರ ಮಹಿಳಾ ಭಜನಾ ಮಂಡಳಿ, ವಿಶ್ವಕರ್ಮ ಸಂಘ, ವೈದ್ಯನಾಥ ಭಜನಾ ಮಂಡಳಿ ಅರಸೀಕಟ್ಟೆ, ರಿಕ್ಷಾ ಚಾಲಕ- ಮಾಲಕರ ಸಂಘ ಬಂಟಕಲ್ಲು ಮತ್ತು ಬಿ.ಸಿ.ರೋಡ್, ಕಾರು ಚಾಲಕ- ಮಾಲಕರ ಸಂಘ, ವೀರಮಾರುತಿ ಕಲಾ ಸಂಘ ಅರಸೀಕಟ್ಟೆ, ಐಸಿವೈಎಂ ಪಾಂಬೂರು ಸೇರಿದಂತೆ ವಿವಿಧ ಸಂಘಟನೆಗಳು ಭಾಗವಹಿಸಿದ್ದವು.