ಬೋಟಿನ ಡೆಕ್ಗೆ ಬಿದ್ದು ಕಾರ್ಮಿಕ ಮೃತ್ಯು
ಮಂಗಳೂರು, ಎ.5: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ಬೋಟಿನ ಡೆಕ್ಗೆ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಆಂಧ್ರ ನಿವಾಸಿ ವೆಂಕ ಚಿನ್ನ ರಾವ್(26) ಮೃತಪಟ್ಟ ಕಾರ್ಮಿಕ.
ಈತ ಹಳೆ ಬಂದರಿನಿಂದ ಮೀನುಗಾರಿಕೆಗೆ ಮುಬುಡು ಹೆಸರಿನ ಬೋಟ್ನಲ್ಲಿ ಸಹಚರರೊಂದಿಗೆ ತೆರಳಿದ್ದರು. ಆಳಸಮುದ್ರದಲ್ಲಿ ಮೀನು ಶೇಖರಿಸುವಾಗ ಆಕಸ್ಮಿಕವಾಗಿ ಡೆಕ್ಗೆ ಬಿದ್ದು ಸಾವಿಗೀಡಾಗಿದ್ದರು. ಡೆಕ್ಗೆ ಹೇಗೆ ಬಿದ್ದರು ಎಂದು ತಿಳಿದುಬಂದಿಲ್ಲ.
ಈ ಕುರಿತು ಮಂಗಳೂರು ಉತ್ತರ (ಬಂದರ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story