ಉಡುಪಿ ಮಸೀದಿಯಲ್ಲಿ ಅಮೃತ್ ಶೆಣೈ ಮತಯಾಚನೆ
ಉಡುಪಿ, ಎ.5: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಮೃತ್ ಶೆಣೈ ಶುಕ್ರವಾರ ಉಡುಪಿ ಜಾಮೀಯ ಮಸೀದಿ ಆವರಣದಲ್ಲಿ ಮತಯಾಚನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಚುನಾವಣೆಯ ಗೆದ್ದು ಸಂಸದನಾಗುವ ಅವಕಾಶ ಸಿಕ್ಕಿದರೆ ಈ ಕ್ಷೇತ್ರದ ಅಭಿವೃದ್ದಿ ಜೊತೆ ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಹಿದ್ ಅಲಿ, ಸಲಾವುದ್ದೀನ್ ಅಬ್ದುಲ್ಲಾ, ಸಮೀರ್, ಮುಹಮ್ಮದ್ ವೌಲಾ, ಸಫ್ಘರ್ ಮೊದಲಾದವರು ಉಪಸ್ಥಿತರಿದ್ದರು.
Next Story