ಮಂಗಳೂರು: ಯುವಕ ನಾಪತ್ತೆ
ಮಂಗಳೂರು, ಎ.5: ಕೆಲಸಕ್ಕಾಗಿ ಮೈಸೂರಿಗೆ ಹೋಗಿ ಬರುವುದಾಗಿ ತೆರಳಿದ ಯುವಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಆಕಾಶಭವನ ನಂದನಪುರ ನಿವಾಸಿ ಜಿತೇಶ್(24) ನಾಪತ್ತೆಯಾದವರು.
ಇವರು ಮಾ.28ರಂದು ಮಧ್ಯಾಹ್ನ ವೇಳೆ ಕೆಲಸದ ನಿಮಿತ್ತ ಮೈಸೂರಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೊರಟು ಹೋದವರು ಮರಳಿ ಮನೆಗೆ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ. ಮೊಬೈಲ್ ಕೂಡಾ ಸ್ವಿಚ್ ಆ್ ಆಗಿದೆ.
ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story