ತಾವೆಲ್ಲರೂ ಮನಸು ಮಾಡಿದರೆ ಸ್ವತಂತ್ರ ಅಭ್ಯರ್ಥಿಯ ಗೆಲವು ಅಸಾಧ್ಯವಲ್ಲ: ಅಮೃತ್ ಶೆಣೈ
ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಮೃತ್ ಶೆಣೈ ಅವರು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆ ಇಂದು ಪ್ರಚಾರ ನಡೆಸಿದರು.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶೆಣೈ ಅವರು ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದರು. ರೈತರ ಸಂಕಷ್ಟಕ್ಕೆ, ಕಾಫಿ ಹಾಗೂ ಅಡಕೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆಯನ್ನು ನೀಡಿದರು, ಅದಲ್ಲದೇ ಕ್ಷೇತ್ರದಲ್ಲಿ ಹಿಂದು ಮುಸ್ಲಿಮ್ ಕ್ರಿಶ್ಚಿಯನ್ ಸಮುದಾಯದವರೆಲ್ಲಾ ಅನ್ಯೋನ್ಯವಾಗಿ ಬದುಕಲಿಕ್ಕೆ ಪೂರಕ ವಾತಾವರಣ ಸೃಷ್ಟಿಸಲಾಗುವುದು ಎಂದರು. ಸಾಮಾಜಿಕ ಸಾಮರಸ್ಯ ಹಾಳುಗೆಡುವ ಶಕ್ತಿಗಳ ವಿರುದ್ಧ ತೀವ್ರ ಹೋರಾಟ ನಡೆಸುವ ವಾಗ್ದಾನ ನೀಡಿದರು. ಜಿಲ್ಲೆಯಲ್ಲಿ ಶಿಕ್ಷಣ ಪೂರೈಸಿದ ಪದವೀಧರರನ್ನು ಜಿಲ್ಲೆಯಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು. ಉಭಯ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿ ಮಾಡುವ ಉದ್ಯಮಗಳನ್ನು ಸ್ಥಾಪಿಸಲು ಉತ್ತೇಜನ ನೀಡಲಾಗುವುದು ಎಂದರು.
ಬ್ಯಾಂಕಿಂಗ್ ನೀತಿಗಳಲ್ಲೂ ಬದಲಾವಣೆ ತರಲು ಹೋರಾಟ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ತರಿಕೆರೆಯ ಯುವ ಮುಖಂಡ ಅಮೃತ್ ಶೆಣೈ ಯವರು ದಿನದ ಇಪ್ಪತ ನಾಲ್ಕು ಗಂಟೆಯೂ ಜನರ ಸುಖ ಕಷ್ಟಗಳಿಗೆ ಸ್ಪಂದಿಸುವವರು ಎಂದರು. ಉಡುಪಿಯ ಖ್ಯಾತ ಮನಃಶಾಸ್ತ್ರಜ್ಞೆ ಜಯಶ್ರೀ ಭಟ್ ರವರು ಶೆಣೈ ಯವರ ಸಮಾಜ ಸೇವೆಯನ್ನು ವಿವರಿಸಿ, ಮೆಚ್ಚುಗೆ ವ್ಯಕ್ತಪಡಿಸಿ, ಅವರ ವಜ್ರದ ಗುರುತಿಗೆ ಮತದಾನ ಮಾಡಲು ಮನವಿ ಮಾಡಿದರು . ಅಹ್ಮದ್, ರಾಜೇಶ್ ಮತ್ತಿತ್ತರರು ಉಪಸ್ಥಿತರಿದ್ದರು.