ಬೆಂಕಿ ತಗುಲಿ ವ್ಯಕ್ತಿ ಮೃತ್ಯು
ಮಂಗಳೂರು, ಎ.7: ನಗರದ ಬಲ್ಲಾಳ್ಬಾಗ್ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರು ಮಲಗಿದ್ದಾಗ ಬೆಡ್ಗೆ ಅಚಾನಕ್ ಬೆಂಕಿ ತಗುಲಿ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಬಲ್ಲಾಳ್ಬಾಗ್ ವಿವೇಕನಗರ ನಿವಾಸಿ ರವೀಂದ್ರ (40) ಮೃತಪಟ್ಟವರು.
ಶನಿವಾರ ರಾತ್ರಿ ಇವರು ಊಟ ಮಾಡಿ ಮಲಗಿದ್ದರು. ರಾತ್ರಿ ಸುಮಾರು 11ಗಂಟೆಯ ವೇಳೆಗೆ ಮನೆಯ ಚಿಮಣಿ ದೀಪ ಅಚಾನಕ್ ಆಗಿ ಬಿದ್ದು ರವೀಂದ್ರ ಅವರ ಬೆಡ್ಮೇಲೆ ಬೆಂಕಿ ತಗುಲಿದೆ. ಇದರಿಂದ ಬೆಂಕಿ ಆವರಿಸಿ ರವೀಂದ್ರ ಅವರು ಗಂಭೀರ ಗಾಯಗೊಂಡು ಹೊರಬರಲಾಗದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರವೀಂದ್ರ ಅವರ ತಾಯಿ ಲಕ್ಷ್ಮೀ ಅವರು ಹೊರಗೆ ಮಲಗಿದ್ದು, ಅವರು ಅಸೌಖ್ಯದಿಂದಿದ್ದಾರೆ.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story