ಮೂಡುಬಿದಿರೆ: ‘ತಾಜ್ ಗೋಲ್ಡ್ ಆ್ಯಂಡ್ ಡೈಮಂಡ್ಸ್’ ಸ್ವರ್ಣಾಭರಣ ಮಳಿಗೆ ಶುಭಾರಂಭ
ಮೂಡುಬಿದಿರೆ, ಎ.8: ಇಲ್ಲಿನ ಲಾವಂತಬೆಟ್ಟು ರಸ್ತೆಯ ಅಮರಶ್ರೀ ಥಿಯೇಟರ್ ಬಳಿಯ ಹೊಸನ್ನ ಪಾಯಿಂಟ್ ಎಂಬಲ್ಲಿ ಆರಂಭಗೊಂಡಿರುವ ‘ತಾಜ್ ಗೋಲ್ಡ್ ಆ್ಯಂಡ್ ಡೈಮಂಡ್ಸ್’ ಸ್ವರ್ಣಾಭರಣಗಳ ನೂತನ ಮಳಿಗೆ ಸೋಮವಾರ ಶುಭಾರಂಭಗೊಂಡಿತು.
ಮೂಡುಬಿದಿರೆ ಬದ್ರಿಯಾ ಜುಮಾ ಮಸೀದಿಯ ಮುದರ್ರಿಸ್ ಮುಸ್ತಫ ಯಮಾನಿ ನೂತನ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅಸ್ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ದುಆಗೈದರು.
ಈ ಸಂದರ್ಭ ತೋಡಾರು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಸ್ಸಲಾಂ ಬೂಟ್ ಬಝಾರ್, ಪಾರ್ಕರ್ ಗ್ರೂಪ್ ನ ಮುಹಮ್ಮದ್ ಗೌಸ್ ಪಾರ್ಕರ್, ಪುರಸಭಾ ಸದಸ್ಯ ಹನೀಫ್ ಅಲಂಗಾರ್, ಮೌಲಾನ ಅಬು ಸೂಫ್ಯಾನ್, ಉಡುಪಿ ಅಭಿಮಾನ್ ಗೋಲ್ಡ್ ನ ಮಾಲಕ ಎಂ.ಹಾಜಬ್ಬ ಅಬ್ದುಲ್ಲಾ, ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಟ್ರಸ್ಟಿ ಜಿ.ಉಮೇಶ್ ಪೈ, ತಾಜ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಾಲಕ ಸಂಶುದ್ದೀನ್ ಉಪಸ್ಥಿತರಿದ್ದರು.
ಬಂಪರ್ ಕೊಡುಗೆ:
ತಾಜ್ ನೂತನ ಮಳಿಗೆ ಶುಭಾರಂಭದ ಪ್ರಯುಕ್ತ ಅದೃಷ್ಟಶಾಲಿ ಗ್ರಾಹಕರಿಗೆ ಒಂದು ಲಕ್ಷ ರೂ. ಮೌಲ್ಯದವರೆಗಿನ ಚಿನ್ನಾಭರಣ ಗೆಲ್ಲುವ ಅವಕಾಶವನ್ನು ಒದಗಿಸಿದೆ. ಇದಲ್ಲದೆ 50,000 ರೂ., 30,000 ರೂ. ಹಾಗೂ 20,000 ರೂ. ವೌಲ್ಯದ ಚಿನ್ನಾಭರಣಗಳನ್ನು ಗೆಲ್ಲುವ ಅವಕಾಶವೂ ಅದೃಷ್ಟಶಾಲಿ ಗ್ರಾಹಕರದ್ದಾಗಲಿದೆ. ಅದೃಷ್ಟ ಚೀಟಿ ಎತ್ತುವ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುವ ಈ ಕೊಡುಗೆ ಮೇ 15ರವರೆಗೆ ಇರಲಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಜ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಾಲಕ ಸಂಶುದ್ದೀನ್ ಕೋರಿದ್ದಾರೆ.